Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ತೆಕ್ಕಟ್ಟೆ: “ಪ್ರಸಾಧನ” ‘ನೂತನ ಯಕ್ಷಾಭರಣ ಅನಾವರಣ’
ಯಶಸ್ವಿ ಕಲಾವೃಂದಕ್ ಕೊಟ್ಟದ್ ಎಲ್ಲೂ ಹೋತಿಲ್ಲೆ, ಮೂರ್ ಪಟ್ ಆಯಿ ಸಮಾಜಕ್ ಸಲ್ಲತ್: ಆನಂದ ಸಿ. ಕುಂದರ್

ಕೋಟ: “ಕಣ್ಣಂಗೆ ಕಾಂಬುಕೇ ಸಿಗ್ದಿದ್ ಅಟ್ಟಣಿಗೆ ಆಟ, ದೊಂದಿ ಬೆಳಕಿನ ಆಟ, ಹವ್ಯಾಸಿ ಜೋಡಾಟ ಹೀಗೆ ಹಲವ್ ಬಗಿ ಆಟ ಮಾಡಿ ದಶಮ ಸಂಭ್ರಮದಲ್ ದೂಳ್ ಎಬ್ಸಿ ಬಿಟ್ ಸಂಘ ಯಶಸ್ವಿ. ಹೂವಿನ್‍ಕೋಲ್ ಅಲ್ಲಲ್ ಮನಿ ಮನಿಗ್ ಹೋಯ್ ಮತ್ ಆ ಸಾಂಪ್ರದಾಯಿಕ ಕಲಿಗ್ ಜೀವ ಕೊಟ್ ಸಂಸ್ಥೆ ಯಶಸ್ವಿ. ಕರಾವಳಿ ಭಾಗದಲ್ ಬಾಳ ವರ್ಷದಿಂದ ಒಳ್ಳೆ ಗುರುಗಳನ್ ಸೇರ್ಸಕಂಡ್ ವರ್ಷದಲ್ ಆರ್ ತಿಂಗಳೂ ತರಗತಿ ಮಾಡಿ ಮೇಲ್ಪಂಕ್ತಿಯಲ್ ಇಪ್ ಸಂಘ ಯಶಸ್ವಿ. ಯಶಸ್ವಿ ಸಂಘಕ್ ಕೊಟ್ ಕೊಡುಗೆ ಹಾಳಾತಿಲ್ಲೆ. ಕೊಟ್ಟದ್ದ್‍ಕ್ಕೂ ಮೂರ್ ಪಟ್ ಜಾಸ್ತಿ ಆಯ್ ಸಮಾಜಕ್ ಪ್ರಯೋಜನಕ್ ಬತ್ತತ್” ಎಂದು ವೇಷಭೂಷಣ ಅನಾವರಣಗೊಳಿಸಿ ಆನಂದ ಸಿ. ಕುಂದರ್ ಮಾತನ್ನಾಡಿದರು.

ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಇವರ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವದಲ್ಲಿ ಜುಲೈ 16ರಂದು ‘ಕುಂದಾಪುರ ಕನ್ನಡ ದಿನಾಚರಣೆ’ ಪ್ರಯುಕ್ತ ‘ಗ್ವಲ್ ಗ್ವಲ್ಲಿ’ ಯಕ್ಷಗಾನದ ಸಂದರ್ಭ ಹೊಸ ವೇಷಭೂಷಣ ಹೊಂದಿದ ಬಾಲಗೋಪಾಲರಿಗೆ ತುರಾಯಿ ಸಿಕ್ಕಿಸುವುದರ ಮೂಲಕ “ಪ್ರಸಾಧನ” ನೂತನ ಯಕ್ಷಾಭರಣ ಅನಾವರಣಗೊಳಿಸಿ ಆನಂದ ಸಿ. ಕುಂದರ್ ಉದ್ಘಾಟಿಸಿ ಮಾತನ್ನಾಡಿದರು.

‘ಕುಂದಾಪ್ರ ಭಾಷಿಗ್ ಒಂದ್ ಸೆಳ್ತ ಇತ್. ಅದ್ರ್ ಅಧ್ಯಯನ ರಾಜ್ಯ ಮಟ್ಟದಲ್ ಆಯ್ಕ್. ಸದ್ಯದಲ್ಲೇ ಅಧ್ಯಯನ ಪೀಠದಲ್ ಕುಂದಾಪ್ರ ಕನ್ನಡಕ್ ಒಳ್ಳೆ ಜಾಗ ಸಿಕ್ಕತ್. ಯಕ್ಷಗಾನದಲ್ ಕುಂದಾಪ್ರ ಕನ್ನಡದ ಸಾಹಿತ್ಯ ಬಳ್ಸಕಂಡ್ ಪ್ರಾಸದಲ್ ಪದ ಬರೂದ್ ಅಸ್ಟ್ ಸುಲ್ಭ ಇಲ್ಲೆ. ಇಪ್ಪತ್ತೈದನೇ ವರ್ಷಕ್ ಕಾಲ್ ಇಡ್ತ ಇಪ್ ಯಶಸ್ವೀ ಕಲಾವೃಂದನ ಗೆಲ್ಸುಕ್ ಪ್ರಸಂಗ ಬರ್ದ್ ಮೊಗಿಬೆಟ್ ಇಪ್ ಹೊತ್ತಿಗ್ ಜಯ ಸಿಕ್ಕಿಯೇ ಸಿಕ್ಕತ್’ ಎಂದು ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವುದರ ಮೂಲಕ ಮಾನ್ಯ ಜಯಪ್ರಕಾಶ ಹಗ್ಡೆ ಅಭಿಪ್ರಾಯಪಟ್ಟರು.

ಯಕ್ಷಗಾನಕ್ಕೂ, ಕುಂದಾಪುರ ಕನ್ನಡಕ್ಕೂ ಬಹಳ ಹಿಂದಿನಿಂದಲೂ ಅವಿನಾಬಾವ ಸಂಬಂಧ. ಯಕ್ಷ ಕಲಾವಿದರು ದೇಶ ವಿದೇಶ ತಿರುಗುತ್ತ, ಕುಂದಾಪುರ ಕನ್ನಡದಲ್ಲಿ ಹರಟುತ್ತಾ, ಕುಂದಗನ್ನಡದ ಸೊಗಡನ್ನು ಪಸರಿಸಿದರು. ಯಕ್ಷಗಾನ ಇರುವಷ್ಟು ಕಾಲ ಕುಂದಗನ್ನಡಕ್ಕೆ ಅಳಿವಿಲ್ಲ. ಇಲ್ಲಿ ಆನಂದ ಕುಂದರ್ ಬಹುದೊಡ್ಡ ಮೊತ್ತದ ಯಕ್ಷಗಾನ ವೇಷಭೂಷಣವನ್ನು ಸಂಸ್ಥೆಗೆ ನೀಡಿದರು. ಈ ದಿನ ಉದ್ಘಾಟನೆ ಹೆಚ್ಚು ಸೂಕ್ತ. ಪ್ರಸಾದ್ ಮೊಗೆಬೆಟ್ಟು ಅವರು ಕುಂದಾಪುರ ಕನ್ನಡವನ್ನು ಯಕ್ಷ ಛಂದಸ್ಸಿನೊಳಗೆ ಬಂಧಿಸಿ ಯಕ್ಷ ಸಾಹಿತ್ಯಕ್ಕೆ ಮೆರುಗು ನೀಡಿ ಬೆಳಗುತ್ತಿರುವ ಕಲಾವಿದರು. ಸಂಸ್ಥೆಯ ಪೋಷಕ ಸುಧಾಕರ ಶೆಟ್ಟಿ ತೆಕ್ಕಟ್ಟೆ, ಹಾಗೂ ಯಕ್ಷಾಭರಣ ತಯಾರಕರಾದ ಗಣೇಶ ಬಳಗಾರ ಇವರ ಸಾಧನೆಯನ್ನು ಸ್ತುತಿಸಿ ಅಭಿನಂದಿಸಿ ಕುಂದಾಪುರದ ಖ್ಯಾತ ವಕೀಲರಾದ ಎ.ಎಸ್.ಎನ್. ಹೆಬ್ಬಾರ್ ಮಾತನ್ನಾಡಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್, ಸಾಂಸ್ಕøತಿಕ ಚಿಂತಕ ಉದಯ ಶೆಟ್ಟಿ ಪಡುಕೆರೆ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ತೆಕ್ಕಟ್ಟೆ ಇದರ ಮಾಜಿ ಅಧ್ಯಕ್ಷ ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಧನ್ಯವಾದಗೈದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಕುಂದಾಪುರ ಕನ್ನಡದಲ್ಲಿ ರಾಮಾಯಣ ಪ್ರಸಂಗದ ಕೆಲವು ಭಾಗ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ “ಗ್ವಲ್ ಗ್ವಲ್ಲಿ” ರಂಗದಲ್ಲಿ ಪ್ರಸ್ತುತಿಗೊಂಡಿತು.

ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಇವರ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವದಲ್ಲಿ ಜುಲೈ 16ರಂದು ‘ಕುಂದಾಪುರ ಕನ್ನಡ ದಿನಾಚರಣೆ’ ಪ್ರಯುಕ್ತ ‘ಗ್ವಲ್ ಗ್ವಲ್ಲಿ’ ಯಕ್ಷಗಾನದ ಕಾರ್ಯಕ್ರಮದಲ್ಲಿ ಸಂಸ್ಥೆಯ ಪೋಷಕರಾದ ಸುಧಾಕರ ಶೆಟ್ಟಿ ತೆಕ್ಕಟ್ಟೆ, ಹಾಗೂ ಯಕ್ಷಾಭರಣ ತಯಾರಕರಾದ ಗಣೇಶ ಬಳಗಾರ ಅಭಿನಂದಿಸಲಾಯಿತು. ಗ್ರಾಮ ಪಂಚಾಯತ್ ತೆಕ್ಕಟ್ಟೆ ಇದರ ಮಾಜಿ ಅಧ್ಯಕ್ಷ ಶಿವರಾಮ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *