
ಕೋಟ: ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಮಾತೃಸಂಸ್ಥೆ ಕೋಟ ಪಂಚವರ್ಣ ಯುವಕ ಮಂಡಲದ ಸಹಯೋಗದೊಂದಿಗೆ ಆ.30ರ ಬುಧವಾರ ಸಾಮಾಜಿಕ ಕಾರ್ಯಕ್ರಮ ಹದಿಹರೆಯದವರ ಸಮಸ್ಯೆಗಳು ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮ. 7ನೇ ಮಾಲಿಕೆ ಅರಿವು ನಿಮಗಿರಲಿ ನೆರವು ಶೀರ್ಷಿಕೆಯಡಿ ಸರಕಾರಿ ಪ್ರೌಢಶಾಲೆ ಗುಂಡ್ಮಿ ಇಲ್ಲಿನ ಸಭಾಭವನದಲ್ಲಿ ಪೂರ್ವಾಹ್ನ 10-00ಕ್ಕೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸಂಪನ್ಮೂಲ ವ್ಯಕ್ತಿಯಾಗಿ ತೆಕ್ಕಟ್ಟೆ ಪರಿಸರದ ಪರಿಸರದ ಪ್ರಸಿದ್ಧ ವೈದ್ಯೆ ಡಾ.ಸುಮಂಗಲ ಭಾಗವಹಿಸಲಿದ್ದಾರೆ ಎಂದು ಪಂಚವರ್ಣ ಮಹಿಳಾ ಮಂಡಲದ ಆಧ್ಯಕ್ಷೆ ಕಲಾವತಿ ಅಶೋಕ್ ತಿಳಿಸಿದ್ದಾರೆ.














Leave a Reply