Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ – ಹಿಂದೂ ರುದ್ರಭೂಮಿ ಸ್ವಚ್ಛತಾ ಕಾರ್ಯಕ್ರಮ

ಕೋಟ: ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ,ಸಾಲಿಗ್ರಾಮ ಘಟಕ ಹಾಗೂ ಮಹಿಳಾ ಸಂಘಟನೆ ಸಾಲಿಗ್ರಾಮ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಉಡುಪಿ ಇವರ ಸಾರಥ್ಯದಲ್ಲಿ ಪಟ್ಟಣ ಪಂಚಾಯತ್ ಸಾಲಿಗ್ರಾಮ ಇವರ ಸಹಕಾರದಲ್ಲಿ,ಸೌಹಾರ್ದ ಫ್ರೆಂಡ್ಸ್ ಗೆಂಡೆಕೆರೆ ಇವರ ಸಹಯೋಗದೊಂದಿಗೆ ಗೆಂಡೆಕೆರೆ ಹಿಂದೂ ರುದ್ರಭೂಮಿ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು.

ಕಾರ್ಯಕ್ರಮದಲ್ಲಿ ಮೋ. ಯು. ಸಂ. ಸಾಲಿಗ್ರಾಮ ಘಟಕದ ಅಧ್ಯಕ್ಷ ಕಿರಣ್ ಕುಂದರ್, ಕಾರ್ಯದರ್ಶಿ ಜಗನ್ನಾಥ ಅಮೀನ್, ಪಟ್ಟಣ ಪಂಚಾಯತ್ ಸದಸ್ಯರಾದ ಶ್ರೀನಿವಾಸ ಅಮೀನ್,ಕಿರಿಯ ಅರೋಗ್ಯ ಸಹಾಯಕಿ ಮಮತಾ, ಮಾಜಿ ಅಧ್ಯಕ್ಷ ಶೇಖರ ಮರಕಾಲ,ಸತೀಶ ಮರಕಾಲ, ಕೃಷ್ಣಮೂರ್ತಿ ಮರಕಾಲ,ಶ್ರೀಮತಿ ಶಾಲಿನಿ ವಿಜಯ್ ಕಾಂಚನ್, ಗಿರಿಜಾ ಸುವರ್ಣ, ರೇವತಿರಾಜ್, ಗೀತಾ ಭಾಸ್ಕರ್, ಸೌಹಾರ್ದ ಫ್ರೆಂಡ್ಸ್ ಗೆಂಡೆಕೆರೆ ಅಧ್ಯಕ್ಷ ಬಷೀರ್, ಪೌರ ಕಾರ್ಮಿಕರು, ಸ್ಥಳೀಯರು ಉಪಸ್ಥಿತರಿದ್ದರು.

ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ,ಸಾಲಿಗ್ರಾಮ ಘಟಕ ಹಾಗೂ ಮಹಿಳಾ ಸಂಘಟನೆ ಸಾಲಿಗ್ರಾಮ ನೇತ್ರತ್ವದಲ್ಲಿ ಗೆಂಡೆಕೆರೆ ಹಿಂದೂ ರುದ್ರಭೂಮಿ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು.

Leave a Reply

Your email address will not be published. Required fields are marked *