
ಕೋಟ: ಶ್ರೀಕ್ಷೇತ್ರ ಗೋಳಿಗರಡಿ ಮೇಳದ ನೂತನ ಪ್ರಸಂಗ ¾ಕಾರ್ಣಿಕದ ಕರಿಗಂಧ ಬಿಡುಗಡೆ ಸಮಾರಂಭ ಡಿ.೪ರಂದು ಗೋಳಿಗರಡಿ ಕ್ಷೇತ್ರದ ವಠಾರದಲ್ಲಿ ಜರಗಿತು.
ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ರಮೇಶ್ ರಾವ್ ಪ್ರಸಂಗ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಕೊರಗಜ್ಜನ ಮಹಿಮೆ ಸಾಕಷ್ಟು ಕಾರಣಿಕವಾದದ್ದು. ಅದನ್ನು ಕಾರಣಿಕದ ಕರಿಗಂಧ ಪ್ರಸಂಗದ ಮೂಲಕ ಪ್ರಚುರಪಡಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಕಳಿಬೈಲು ಕೊರಗಜ್ಜ ದೈವಸ್ಥಾನದ ಆಡಳಿತ ಮೊಕ್ತೇಸರ ಎಂ.ಸಿ.ಚAದ್ರಶೇಖರ್ ಮಾತನಾಡಿ, ಗೋಳಿಗರಡಿ ಮೇಳಕ್ಕೆ ಸಾಕಷ್ಟು ಇತಿಹಾಸವಿದೆ ಹಾಗೂ ಪ್ರಸ್ತುತ ಬಡಗುತಿಟ್ಟಿನ ಪ್ರಸಿದ್ಧ ಮೇಳವಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಪ್ರಸಂಗದ ಪದ್ಯರಚನಾಕಾರ ಬಿ.ಕೆ.ಶ್ರೀನಿವಾಸ ಸಾಲ್ಯಾನ್, ಹಿರಿಯ ಯಕ್ಷಗಾನ ಕಲಾವಿದ ಎಂ.ಕೆ.ರಮೇಶ್ ಆಚಾರ್ಯ, ಮೇಳದ ವ್ಯವಸ್ಥಾಪಕ ಜಿ. ವಿಠಲ ಪೂಜಾರಿ, ಮೇಳದ ಪ್ರಧಾನ ಭಾಗವತ ಸುರೇಶ್ ರಾವ್ ಬಾರಕೂರು ಉಪಸ್ಥಿತರಿದ್ದರು. ಗಣೇಶ್ ಪೂಜಾರಿ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು.
ಶ್ರೀಕ್ಷೇತ್ರ ಗೋಳಿಗರಡಿ ಮೇಳದ ನೂತನ ಪ್ರಸಂಗ ಕಾರ್ಣಿಕದ ಕರಿಗಂಧ ಪ್ರಸಂಗವನ್ನು ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ರಮೇಶ್ ರಾವ್ ಬಿಡುಗಡೆಗೊಳಿಸಿದರು. ಪ್ರಸಂಗದ ಪದ್ಯರಚನಾಕಾರ ಬಿ.ಕೆ.ಶ್ರೀನಿವಾಸ ಸಾಲ್ಯಾನ್, ಹಿರಿಯ ಯಕ್ಷಗಾನ ಕಲಾವಿದ ಎಂ.ಕೆ.ರಮೇಶ್ ಆಚಾರ್ಯ, ಮೇಳದ ವ್ಯವಸ್ಥಾಪಕ ಜಿ. ವಿಠಲ ಪೂಜಾರಿ ಮತ್ತಿತರರು ಇದ್ದರು.
Leave a Reply