Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ ಶ್ರೀರಾಮ ದೇಗುಲಕ್ಕೆ ವಿಪಕ್ಷ ನಾಯಕ ಕೋಟ ಭೇಟಿ

ಕೋಟ: ಅಯೋಧ್ಯದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಹಿನ್ನಲೆಯಲ್ಲಿ ಸಾಲಿಗ್ರಾಮದ ಒಳಪೇಟೆಯ ಶ್ರೀರಾಮ ದೇಗುಲಕ್ಕೆ ವಿಧಾನಪರಿಷತ್ ವಿಪಕ್ಷ ನಾಯ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಶ್ರೀ ದೇಗುಲ ವಿಶೇಷವಾಗಿ ಆಗಿನ ಕಾಲದಲ್ಲಿ ಪುಟಾಣಿಗಳೇ ಮಣ್ಣಿನ ಮೂರ್ತಿಯ ಮೂಲಕ ನಿರ್ಮಿಸಿ ಆರಾಧಿಸಿಕೊಂಡು ಬರುತ್ತಿದ್ದು ಈ ಹಿನ್ನಲೆಯಲ್ಲಿ ಪ್ರತಿವರ್ಷ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಇಲ್ಲಿ ನೆರವೆರುತ್ತಿದೆ ಈ ದಿಸೆಯಲ್ಲಿ ಸೋಮವಾರ ಕೂಡಾ ಪೂರ್ವಾಹ್ನದಿಂದ ನೈವೇದ್ಯ ಪೂಜೆ,ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ,ಶ್ರೀರಾಮನಾಮ ಯಜ್ಞ,ಮಹಾಪೂಜೆ,ಭಕ್ತಾಧಿಗಳಿಗೆ ಉಪಹಾರದ ವ್ಯವಸ್ಥೆ ಮಾಡಿತು.ಸಂಜೆ ವೈಕುಂಠ ಹೇರ್ಳೆ ನೇತೃತ್ವದಲ್ಲಿ ತಾಳಮದ್ಧಳೆ ,ದೀಪೋತ್ಸವ ಕಾರ್ಯಕ್ರಮಗಳು ನೆರವೆರಿತು. ದೇಗುಲದ ಪ್ರಮುಖರಾದ ವಾಸುದೇವ್ ಭಟ್,ನಾಗೇಶ್ ಹೆಗ್ಡೆ,ವಿವೇಕ್ ಹೆಗ್ಡೆ,ಸುರೇಂದ್ರ ಹೆಗ್ಡೆ,ಅಜೇಯ್ ಪೈ ಮತ್ತಿತರರು ಇದ್ದರು.

ಸಾಲಿಗ್ರಾಮದ ಒಳಪೇಟೆಯ ಶ್ರೀರಾಮ ದೇಗುಲಕ್ಕೆ ವಿಧಾನಪರಿಷತ್ ವಿಪಕ್ಷ ನಾಯ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ದೇಗುಲದ ಪ್ರಮುಖರಾದ ವಾಸುದೇವ್ ಭಟ್, ನಾಗೇಶ್ ಹೆಗ್ಡೆ, ವಿವೇಕ್ ಹೆಗ್ಡೆ, ಸುರೇಂದ್ರ ಹೆಗ್ಡೆ, ಅಜೇಯ್ ಪೈ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *