Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪ್ರಗತಿ ಯುವಕ ಸಂಘ ಕೋಡಿ-ಕನ್ಯಾಣ 30ನೇ ವಾರ್ಷಿಕೋತ್ಸವ ಸಾಧಕರಿಗೆ ಸನ್ಮಾನ

ಕೋಟ: ಪ್ರಗತಿ ಯುವಕ ಸಂಘ ಕೋಡಿ-ಕನ್ಯಾಣ ಇದರ 30ನೇ ವಾರ್ಷಿಕೋತ್ಸವ ಕಾರ್ಯಕ್ರಮ ಇತ್ತೀಚಿಗೆ ಶ್ರೀ ಮಹಾಸತೀಶ್ವರೀ ಮಾಸ್ತಿ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಜರಗಿತು.

ಈ ಸಂದರ್ಭದಲ್ಲಿ ಸ್ಥಳೀಯ ಪ್ರತಿಭೆಗಳಾದ ಮಾಸ್ಟರ್ ಧನ್ವಿ ಜೆ.ಅಮೀನ್ ಹಾಗೂ ಕುಮಾರಿ ಸಹನಾ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಗನ್ನಾಥ ಅಮೀನ್ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಸರಕಾರದ ಮಾಜಿ ಸಚಿವ ಪ್ರಮೋದ ಮಧ್ವರಾಜ್, ಸ್ಥಳೀಯ ಉದ್ಯಮಿಗಳಾದ ಶಂಕರ ಕುಂದರ್, ರಾಮ ಪೂಜಾರಿ ಹಾಗೂ ಜಯಂತ ಅಮೀನ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಪ್ರವೀಣ್ ಕಾಂಚನ್ ಸ್ವಾಗತಿಸಿ, ಪ್ರಭಾಕರ ಮೆಂಡನ್ ಧನ್ಯವಾದಗೈದರು. ವಸಂತ ಪುತ್ರನ್ ಕಾರ್ಯಕ್ರಮದ ನಿರೂಪಣೆಗೈದರು. ನಂತರ ಸಾಂಸ್ಕöÈತಿಕ ಕಾರ್ಯಕ್ರಮ ನೆರವೇರಿತು.

ಪ್ರಗತಿ ಯುವಕ ಸಂಘ ಕೋಡಿ-ಕನ್ಯಾಣ ಇದರ 30ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳಾದ ಮಾಸ್ಟರ್ ಧನ್ವಿ ಜೆ.ಅಮೀನ್ ಹಾಗೂ ಕುಮಾರಿ ಸಹನಾ ರವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಸರಕಾರದ ಮಾಜಿ ಸಚಿವ ಪ್ರಮೋದ ಮಧ್ವರಾಜ್, ಸ್ಥಳೀಯ ಉದ್ಯಮಿಗಳಾದ ಶಂಕರ ಕುಂದರ್, ರಾಮ ಪೂಜಾರಿ ಹಾಗೂ ಜಯಂತ ಅಮೀನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *