
ಕೋಟ: ಶ್ರೀ ಮಹಾಂಕಾಳಿ ಫ್ರೆಂಡ್ಸ್ ಕೊರವಡಿ ಇವರ ನೇತೃತ್ವದಲ್ಲಿ ಹಾಗೂ ಗ್ರಾಮ ಪಂಚಾಯತ್ ಕುಂಭಾಶಿ ಇವರ ಸಹಯೋಗದೊಂದಿಗೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಕೊರವಡಿ ಬೀಚ್ ಸ್ವಚ್ಛತೆ ಹಾಗೂ ಶ್ರೀ ಮಲಸಾವರಿ ಮಹಾಂಕಾಳಿ ದೈವಸ್ಥಾನದ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
ಈ ಸಂದರ್ಭದಲ್ಲಿ ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ್ ಪೂಜಾರಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಮ ಶೆಟ್ಟಿ ಸಿಬ್ಬಂದಿ ವರ್ಗದವರಾದ ಮಂಜುನಾಥ್ ಅಭಿಯಾನಕ್ಕೆ ಚಾಲನೆ ನೀಡಿದರು.
ಸ್ಥಳೀಯ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಗಣಪತಿ. ಟಿ . ಶ್ರೀಯಾನ್, ಕೊಮೆ ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಶೇಖರ್ ಕಾಂಚನ್, ದೈವಸ್ಥಾನದ ಅರ್ಚಕ ಬಸವ ಮತ್ತು ಶ್ರೀ ಮಹಾಂಕಾಳಿ ಫ್ರೆಂಡ್ಸ್ ಅಧ್ಯಕ್ಷ ಗಣೇಶ್ ಚಂದನ್ ಹಾಗೂ ಸರ್ವ ಸದಸ್ಯರು ಪಾಲ್ಗೊಂಡಿದ್ದರು.ಉಪಹಾರದ ವ್ಯವಸ್ಥೆಯನ್ನು ತ್ರಿವಿಕ್ರಂ ನಾಯಕ್ ಕಲ್ಪಿಸಿದರು,ಕಾರ್ಯಕ್ರಮವನ್ನು ಹರೀಶ್ ಚಂದನ್ ನಿರೂಪಿಸಿದರು.
ಶ್ರೀ ಮಹಾಂಕಾಳಿ ಫ್ರೆಂಡ್ಸ್ ಕೊರವಡಿ ಇವರ ನೇತೃತ್ವದಲ್ಲಿ ಹಾಗೂ ಗ್ರಾಮ ಪಂಚಾಯತ್ ಕುಂಭಾಶಿ ಇವರ ಸಹಯೋಗದೊಂದಿಗೆ ಬೀಚ್ ಹಾಗೂ ದೈವಸ್ಥಾನ ಸ್ವಚ್ಛತಾ ಅಭಿಯಾನ ಜರಗಿತು.














Leave a Reply