Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ದಿವಂಗತ ಮೇಟಿ ಮುದಿಯಪ್ಪ ನೆನಪಿನ ಯುವ ಕಥಾ ಸ್ಪರ್ಧೆ – 2024

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ,ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಯುವ ಸಾಹಿತಿಗಳಿಗಾಗಿ ಸಾಹಿತಿ, ಕವಿ ದಿವಂಗತ ಮೇಟಿ ಮುದಿಯಪ್ಪ ನೆನಪಿನ  ಜಿಲ್ಲಾಮಟ್ಟದ ‘ಯುವ ಕಥಾ ಸ್ಪರ್ಧೆ’-2024 ಆಯೋಜಿಸಲಾಗಿದೆ.

18 ರಿಂದ 35 ವಯೋಮಿತಿಯ ಉಡುಪಿ ಜಿಲ್ಲೆಯ ಯುವಕ ಯುವತಿಯರು ಯಾರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕಥೆ ಕಳುಹಿಸಲು ಕೊನೆಯ ದಿನಾಂಕ ಮಾರ್ಚ್ 30, 2024. ಸ್ಪರ್ಧೆಯ  ಪ್ರಥಮ ಮತ್ತು ದ್ವಿತೀಯ ಸ್ಥಾನಿಗಳಿಗೆ ನಗದು ಬಹುಮಾನ ತಲಾ ರೂ. 5000 ಹಾಗೂ 3000 ದ ಜೊತೆಗೆ ಪ್ರಶಸ್ತಿ ಪತ್ರ ಹಾಗೂ ಪುಸ್ತಕ ಬಹುಮಾನ ನೀಡಲಾಗುವುದು.
ಕಥೆಯು ಸ್ವರಚಿತವಾಗಿದ್ದು ಡಿಟಿಪಿ ಮಾಡಿದ ಎರಡು ಪ್ರತಿಗಳನ್ನು
ಜನಾರ್ದನ ಕೊಡವೂರು,
ಗೌರವಕಾರ್ಯದರ್ಶಿಗಳು,
ಭಾಮಾ, ಉಡುಪ ಲೇನ್, ಕೆನರಾ ಬ್ಯಾಂಕ್ ಹತ್ತಿರ, ಕೊಡವೂರು, ಅಂಚೆ ,ಕ್ರೋಡಾಶ್ರಮ 576106
ಉಡುಪಿ ಜಿಲ್ಲೆ
ಈ ವಿಳಾಸಕ್ಕೆ ಕಳುಹಿಸಿ ಕೊಡಬೇಕು
ಹೆಚ್ಚಿನ ಮಾಹಿತಿಗಾಗಿ
98452 40309
ರವಿರಾಜ್ ಎಚ್.ಪಿ
ಅಧ್ಯಕ್ಷರು, ಕಸಾಪ ಉಡುಪಿ ತಾಲೂಕು ಘಟಕ
ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿರುತ್ತದೆ.

Leave a Reply

Your email address will not be published. Required fields are marked *