News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ತೆಕ್ಕಟ್ಟೆ – ಜನ ಔಷಧಿ ಪರಿಯೋಜನಾ ಬಗ್ಗೆ ಜಾಗೃತಿ ಮತ್ತು ಸ್ತನ ಹಾಗೂ ಗರ್ಭಗಂಠದ ಕ್ಯಾನ್ಸರ್ ಸ್ಕಿçನಿಂಗ್ ತಪಾಸಣಾ ಶಿಬಿರ

ಕೋಟ: ಭಾರತೀಯ ಜನ ಔಷಧಿ ಕೇಂದ್ರ ತೆಕ್ಕಟ್ಟೆ, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ , ಗ್ರಾ.ಪಂ ಪಂಚಾಯತ್ ತೆಕ್ಕಟ್ಟೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕುಂಭಾಶಿ, ವಾಣಿಜ್ಯ ವಿಭಾಗ ಮಾಹೆ ವಿಶ್ವವಿದ್ಯಾನಿಲಯ ಮಣಿಪಾಲ ಮತ್ತು ಕೆಎಂಸಿ ಆಸ್ಪತ್ರೆ ಮಣಿಪಾಲ ಇದರ ಜಂಟಿ ಆಶ್ರಯದಲ್ಲಿ ಜನ ಔಷಧಿ ಪರಿಯೋಜನಾ ಬಗ್ಗೆ ಜಾಗೃತಿ ಮತ್ತು ಸ್ತನ ಹಾಗೂ ಗರ್ಭಗಂಠದ ಕ್ಯಾನ್ಸರ್ ಸ್ಕಿçನಿಂಗ್ ತಪಾಸಣಾ ಶಿಬಿರ ತೆಕ್ಕಟ್ಟೆ ಜನ ಔಷಧಿ ಕೇಂದ್ರದ ಆವರಣದಲ್ಲಿ ಫೆ.27ರಂದು ನಡೆಯಿತು. ಕಾರ್ಯಕ್ರಮವನ್ನು ತೆಕ್ಕಟ್ಟೆ ಗ್ರಾ.ಪಂ ಅಧ್ಯಕ್ಷೆ ಶೋಭನಾ ಉದ್ಘಾಟಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಮಣಿಪಾಲ ಮಾಹೆ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ| ಸಂದೀಪ್ ಶೆಣ್ಯ, ಡಾ. ಸವಿತಾ ಬಾಸ್ರಿ, ತೆಕ್ಕಟ್ಟೆ ಗ್ರಾ.ಪಂ ಪಿಡಿಒ ಸುನಿಲ್, ಜಯಂಟ್ಸ್ ಗ್ರೂಪ್ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ, ಮಿಲ್ಟನ್ ಒಲಿವರ್, ಶ್ರೀನಾಥ್ ಕೋಟ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ವಿಶಾಲ್ ಶೆಟ್ಟಿ, ಡಾ. ಆದಿತ್ಯ ಶೆಟ್ಟಿ ಮುಂತಾದವರಿದ್ದರು. ಸುಮಾರು 100 ಜನ ಶಿಬಿರದ ಪ್ರಯೋಜನ ಪಡೆದುಕೊಂಡರು. ಎಲ್ಲರಿಗೂ ಹೆಲ್ತ್ ಕಿಟ್ ವಿತರಿಸಲಾಯಿತು.

ಭಾರತೀಯ ಜನ ಔಷಧಿ ಕೇಂದ್ರ ತೆಕ್ಕಟ್ಟೆ, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಜನ ಔಷಧಿ ಪರಿಯೋಜನಾ ಬಗ್ಗೆ ಜಾಗೃತಿ ಮತ್ತು ಸ್ತನ ಹಾಗೂ ಗರ್ಭಗಂಠದ ಕ್ಯಾನ್ಸರ್ ಸ್ಕಿçನಿಂಗ್ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ತೆಕ್ಕಟ್ಟೆ ಗ್ರಾ.ಪಂ ಅಧ್ಯಕ್ಷೆ ಶೋಭನಾ ಉದ್ಘಾಟಿಸಿ ಶುಭ ಹಾರೈಸಿದರು. ಮಣಿಪಾಲ ಮಾಹೆ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ| ಸಂದೀಪ್ ಶೆಣ್ಯ, ಡಾ. ಸವಿತಾ ಬಾಸ್ರಿ,ತೆಕ್ಕಟ್ಟೆ ಗ್ರಾ.ಪಂ ಪಿಡಿಒ ಸುನಿಲ್, ಜಯಂಟ್ಸ್ ಗ್ರೂಪ್ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *