Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾ ಕೇಂದ್ರದಲ್ಲಿ ವಿಜ್ಞಾನ ಮೇಳ, ಗಣಿತ, ಯೋಗ, ಸಂಸ್ಕೃತಿ ಜ್ಞಾನ ಮಹೋತ್ಸವ

ಕೋಟ: ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾ ಗಿರಿ ತೆಕ್ಕಟ್ಟೆ ಇಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಗೆ ಸಂಲಗ್ನಗೊಂಡ ಶಾಲೆಗಳಿಗೆ ವಿಜ್ಞಾನ ಮೇಳ, ಗಣಿತ, ಯೋಗ, ಸಂಸ್ಕೃತಿ  ಜ್ಞಾನ ಮಹೋತ್ಸವ ಶಿಶುವರ್ಗ, ಬಾಲವರ್ಗದ ವಿದ್ಯಾರ್ಥಿಗಳಿಗೆ ಮೂರು ವರ್ಗದಲ್ಲಿ ನಡೆಸುವ ಕಾರ್ಯಕ್ರಮ ಇತ್ತೀಚಿಗೆ ಶಾಲೆಯಲ್ಲಿ ಜರಗಿತು. ಉದ್ಘಾಟನೆಯನ್ನು 6ನೇ ತರಗತಿ ಕುಮಾರಿ ಸಾನಿಧ್ಯ ಇವರು ತಯಾರಿಸಿದ ಮೊಬೈಲ್ ಚಾರ್ಜರ್ ವಿಜ್ಞಾನ ಮಾದರಿಯನ್ನು ಮುಖ್ಯ ಅತಿಥಿಗಳಾಗಿ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ  ಇವರು ನೆರವೇರಿಸಿ ಮಾತನಾಡಿ ಇಂದಿನ ಸ್ಪರ್ಧೆಯು ವಿಶಿಷ್ಟವಾದದ್ದು , ಅಲ್ಲದೇ ಸಂಸ್ಕೃತಿ , ನಡೆ-ನುಡಿಯ ಜ್ಞಾನದೊಂದಿಗೆ ಪಠ್ಯೇತರ ಪೂರಕವಾಗಿ ನಡೆಯುತ್ತಿದೆ ಎಂದರು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಅಧ್ಯಕ್ಷ ಪಾಂಡುರಂಗ ಪೈ ಹಾಗೂ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುರೇಶ್ ಬೆಟ್ಟಿನ್  ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯನಿ ಸಂಧ್ಯಾ ಭಟ್ ಸ್ವಾಗತಿಸಿದರೆ, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಮಹೇಶ್ ಹೈಕಾಡಿ ಪ್ರಾಸ್ತಾನವೆ ನಡೆಸಿಕೊಟ್ಟರು.  ಗಣಿತ ಪ್ರಮುಖ ಜ್ಯೋತಿ ಅಡಿಗ ಕಾರ್ಯಕ್ರಮವನ್ನು ನೆರವೇರಿಸಿ ಧನ್ಯವಾದಗೈದರು.

ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾ ಕೇಂದ್ರದಲ್ಲಿ ವಿಜ್ಞಾನ ಮೇಳ, ಗಣಿತ, ಯೋಗ, ಸಂಸ್ಕöÈತಿ ಜ್ಞಾನ ಮಹೋತ್ಸವವನ್ನು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ  ಇವರು ನೆರವೇರಿಸಿದರು.

Leave a Reply

Your email address will not be published. Required fields are marked *