Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಡಿಯಾಳಿ ಕಮಲಾಬಾಯಿ ಹೈಸ್ಕೂಲ್ ಇಂಟರಾಕ್ಟ ಪದಗ್ರಹಣ

ರೋಟರಿ ಉಡುಪಿ ಪ್ರಾಯೋಜಿತ  ಕಡಿಯಾಳಿ ಕಮಲಾಬಾಯಿ ಹೈಸ್ಕೂಲ್ ಇಂಟರಾಕ್ಟ ಕ್ಲಬ್ ನ ಪದಗ್ರಹಣ ಸಮಾರಂಭವು  ಯು.ಕಮಲಾಬಾಯಿ ಹೈಸ್ಕೂಲ್, ಕಡಿಯಾಳಿಯಲ್ಲಿ ನೆರವೇರಿತು.  ರೋಟರಿ ಉಡುಪಿ ಅದ್ಯಕ್ಷ ರೋ. ಗುರುರಾಜ ಭಟ್ ರವರು ಇಂಟರಾಕ್ಟ್ ಅಧ್ಯಕ್ಷ ಪ್ರಣವ್  ಮತ್ತು ಕಾರ್ಯದರ್ಶಿ ಪವಿತ್ರ ಅವರಿಗೆ ಪದಪ್ರಧಾನ ನೆರೆವೆರಿಸಿ ಶುಭಹಾರೈಸಿದರು. ಗತ ವರ್ಷದ ಅದ್ಯಕ್ಷ ಚೈತ್ರ ಎಲ್ಲರನ್ನೂ ಸ್ವಾಗತಿಸಿದರು.

ಇಂಟರಾಕ್ಟ ಸಭಾಪತಿ ರೋ. ಸಾದನಾ ಮುಂಡ್ಕೂರ ಶುಭ ಹಾರೈಸಿದರು. ಮಾಜಿ ಅಸಿಸ್ಟೆಂಟ್ ಗವರ್ನರ್  ರೋ ಡಾ. ಗಣೇಶ್ ಅವರು ಜಲಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಸುದರ್ಶನ್ ನಾಯಕ್, ಶಿಕ್ಷಕ ಸಂಯೋಜಕ ಶ್ರೀ ಜಗದೀಶ್, ರೋಟರಿ ಉಡುಪಿಯ  ರೋ. ರಾಮಚಂದ್ರ ಉಪಾಧ್ಯಾಯ,  ಕಾರ್ಯದರ್ಶಿ ರೋ.ವೈಷ್ಣವಿ ಆಚಾರ್ಯ, ರೋ. ಶುಭಲಕ್ಷ್ಮಿ ಭಟ್  ಉಪಸ್ಥಿತರಿದ್ದರು. ಇಂಟರಾಕ್ಟರ್ ರಂಜನ್ ಧನ್ಯವಾದ ಸಮರ್ಪಿಸಿದರು. ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *