Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟದ ಜನತಾ ಸಂಸ್ಥೆಯ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ

ಕೋಟ: ಇಲ್ಲಿನ ಜನತಾ ಸಂಸ್ಥೆಯ ಆವರಣದಲ್ಲಿ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇತ್ತೀಚಿಗೆ ಏರ್ಪಡಿಸಲಾಯಿತು. ಜನತಾ ಸಂಸ್ಥೆಯ ಮುಖ್ಯಸ್ಥರಾದ  ಆನಂದ.ಸಿ.ಕುAದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಆರೋಗ್ಯವೇ ಭಾಗ್ಯ ಏಕಂದರೆ ಪ್ರಪಂಚದಲ್ಲಿ ಖರಿದಿಸಲು ಸಾಧ್ಯವಿಲ್ಲದ ವಸ್ತು ನಮ್ಮ ನಮ್ಮ ಅರೋಗ್ಯ ಮತ್ತು ನಾವು ಅದನ್ನು ಬಹಳ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಮಾಧವ ಪೈ,ಸಹವೈದ್ಯರಾದ ಡಾ. ಅನಾಲಿನಿ, ಡಾ.ಯಶಶ್ರೀ ಶೆಟ್ಟಿ, ಮತ್ತು ಜನತಾ ಸಂಸ್ಥೆಯ ಎ.ಜಿ.ಎಮ್ ಶ್ರೀನಿವಾಸ ಕುಂದರ್ ಉಪಸ್ಥಿತರಿದ್ದರು. ಸಂಸ್ಥೆಯ ತರಬೇತುದಾರರಾದ ರೇಷ್ಮಾ ನಿರೂಪಣೆಗ್ಯೆದು, ಅವಿನಾಶ್ ಸಹಕರಿಸಿದರು. ಕಾರ್ಯಕ್ರಮದ ನಂತರ ಜನತಾ ಸಿಬ್ಬಂದಿಗಳ ಅರೋಗ್ಯ ತಪಾಸಣೆಯನ್ನು ಸಮುದಾಯ ಅರೋಗ್ಯ ಕೇಂದ್ರದವರು ನಡೆಸಿದರು.

ಕೋಟದ ಜನತಾ ಸಂಸ್ಥೆಯ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಜನತಾ ಸಂಸ್ಥೆಯ ಮುಖ್ಯಸ್ಥರಾದ  ಆನಂದ.ಸಿ.ಕುAದರ್ ಉದ್ಘಾಟಿಸಿದರು. Àಮುದಾಯ ಆರೋಗ್ಯ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಮಾಧವ ಪೈ,ಸಹವೈದ್ಯರಾದ ಡಾ. ಅನಾಲಿನಿ, ಡಾ.ಯಶಶ್ರೀ ಶೆಟ್ಟಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *