Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ- ಅತ್ಯಾಚಾರ ಪ್ರಕರಣ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಮುಖಂಡ ನಾಗೇಂದ್ರ ಪುತ್ರನ್ ತಿರುಗೆಟು

ಕೋಟ: ಯಾರೋ ಒಬ್ಬ ಸಮಾಜ ಘಾತುಕ ವ್ಯಕ್ತಿಗಳಿಂದ ಇಂತಹ ಕೃತ್ಯಾವೆಸಗಿ ಅತ್ಯಾಚಾರ ಮಾಡಿದ ಮಾತ್ರಕ್ಕೆ ಈ ಬಿಜೆಪಿಯವರು ಕಾಂಗ್ರೆಸ್ ನಾಯಕರೇ ಅತ್ಯಾಚಾರ ಮಾಡಿದಂತೆ ಸರಕಾರದ ವಿರುದ್ದ ಮಾತನಾಡುತ್ತಾರೆ. ಹೆಚ್ ರೇವಣ್ಣ ಪುತ್ರ ನಿರಂತರ ಅತ್ಯಾಚಾರ ಬೇರೆ ಬೇರೆ ಅನಾಚಾರ ಮಾಡಿ ಜೈಲಿಗೆ  ಹೋಗಿದ್ದು ಮೈತ್ರಿ ಪಕ್ಷದ ಬಿಜೆಪಿಯರವರಿಗೆ ತಿಳಿದಿಲ್ಲವೆ, ಮೊನ್ನೆ ಕಾರ್ಕಳದಲ್ಲಿ ನಡೆದ ಪ್ರಕರಣದಲ್ಲಿ ಆರೋಪಿ ಅಭಯ್, ಅಲ್ತಾಫ್ ಹಾಗೂ ರಿಚಾರ್ಡ್ ಜೋವಿಯರ್ ಎಂಬುವವರಿಗೆ ಮಾದಕ ವಸ್ತು ಸೇವಿಸಿದ್ದ್ದು ಉಡುಪಿ ಜಿಲ್ಲಾ ವರಿಷ್ಠಾಧಿಕಾರಿಗಳು ತನಿಖೆಯಲ್ಲಿ ಕಂಡುಬದಿದೆ. ಹಾಗಾಗಿ ಅತ್ಯಾಚಾರ ಮಾಡುವವರು ಕಾಂಗ್ರೆಸ್, ಬಿಜೆಪಿ ಎಂದು ಗುರುತಿಸದೆ, ಯಾರೇ ತಪ್ಪು ಮಾಡಿದರು  ಕಾನೂನಿನಲ್ಲಿ ಶಿಕ್ಷೆ ಕೊಡಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್  ಅಗ್ರಹಿಸಿ ಬಿಜೆಪಿಯರ ಹೇಳಿಕೆಯನ್ನು ಖಂಡಿಸಿದ್ದಾರೆ.

Leave a Reply

Your email address will not be published. Required fields are marked *