
ಕೋಟ: ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಕೋಟ ಇದರ ಒಂದು ವಾರಗಳ ಕಾಲ ಹಮ್ಮಿಕೊಂಡ ಸೌರಭ ಸಪ್ತಮಿ ಯಕ್ಷ ಸಪ್ತಾಹದ 3ನೇ ದಿನ ಕಾರ್ಯಕ್ರಮ ಸಾಲಿಗ್ರಾಮ ದೇಗುಲದ ಸಭಾಂಗಣದಲ್ಲಿ ಮಂಗಳವಾರ ಜರಗಿತು.
ಸಾಲಿಗ್ರಾಮ ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸAಸ್ಥೆ ಇದರ ಅಧ್ಯಕ್ಷ ಗಿರೀಶ್ ಮಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ಶಂಕರ್ ದೇವಾಡಿಗ ಕಾರ್ಕಡ ಇವರನ್ನು ಗೌರವಿಸಲಾಯಿತು.
ಮೂರನೇ ದಿನದ ಕಾರ್ಯಕ್ರಮದ ಪ್ರಯೋಜಕರಾಗಿ ಇವರನ್ನು ಸೌರಭದ ವತಿಯಿಂದಸಾಲಿಗ್ರಾಮ ಯುವ ವೇದಿಕೆಯ ಅಧ್ಯಕ್ಷ ಗಿರೀಶ ಮಯ್ಯ ಸನ್ಮಾನಿಸಲಾಯಿತು.
ಯಕ್ಷ ಸೌರಭ ಕಲಾರಂಗದ ಕಾರ್ಯಾಧ್ಯಕ್ಷ ಹರೀಶ್ ದೇವಾಡಿಗ ಗಿಳಿಯಾರು, ಹಿರಿಯ ಯಕ್ಷಗಾನ ಗುರು ಮಹಾಬಲ ಭಂಡಾರಿ ಕಾರ್ಕಡ,ಪತ್ರಕರ್ತ ಇಬ್ರಾಹಿಂ ಸಾಹೇಬ್, ಸಾಲಿಗ್ರಾಮ ಯುವ ವೇದಿಕೆಯ ಗೌರವ ಅಧ್ಯಕ್ಷ ಕೃಷ್ಣಪ್ರಸಾದ್ ಹೇರ್ಳೇ.ಪಿ.ವೈ ಮುಖ್ಯ ಅಭ್ಯಾಗತರಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಸದಸ್ಯ ಗಿರೀಶ್ ಗಾಣಿಗ ಬೆಟ್ಲಕ್ಕಿ ಕಾರ್ಯಕ್ರಮ ನಿರೂಪಿಸಿ, ಸೌರಭದ ಕಾರ್ಯದರ್ಶಿ ಶ್ರೀನಾಥ್ ಊರಳ ಸ್ವಾಗತಿಸಿ, ರಾಜೇಶ್ ಕರ್ಕೇರ ಕೋಡಿ ವಂದಿಸಿದರು.
ವೇದಿಕೆಯ ಸಂಘದ ಗುರು ಪ್ರಸಾದ್ ಮೊಗೆಬೆಟ್ಟು ನಿರ್ದೇಶನದಲ್ಲಿ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನ ಜರುಗಿತು.
ಯಕ್ಷ ಸೌರಭ ಶ್ರೀ ಹಿರೇಮಹಾಲಿಮಗೇಶ್ವರ ಕಲಾರಂಗ ಕೋಟ ಇದರ ಸೌರಭ ಸಪ್ತಮಿ ಯಕ್ಷಗಾನ ಸಪ್ತಾಹ 3ನೇ ದಿನ ಕಾರ್ಯಕ್ರಮದಲ್ಲಿ ಸೌರಭದ ವತಿಯಿಂದಸಾಲಿಗ್ರಾಮ ಯುವ ವೇದಿಕೆಯ ಅಧ್ಯಕ್ಷ ಗಿರೀಶ ಮಯ್ಯ ಇವರನ್ನು ಸನ್ಮಾನಿಸಲಾಯಿತು. ಯಕ್ಷ ಸೌರಭ ಕಲಾರಂಗದ ಕಾರ್ಯಾಧ್ಯಕ್ಷ ಹರೀಶ್ ದೇವಾಡಿಗ ಗಿಳಿಯಾರು, ಹಿರಿಯ ಯಕ್ಷಗಾನ ಗುರು ಮಹಾಬಲ ಭಂಡಾರಿ ಕಾರ್ಕಡ,ಪತ್ರಕರ್ತ ಇಬ್ರಾಹಿಂ ಸಾಹೇಬ್ ಮುಖ್ಯ ಅಭ್ಯಾಗತರಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Leave a Reply