
ಬೈಂದೂರು: ಉಡುಪಿ ಜಿಲ್ಲೆ ಕುಂದಾಪುರ ಇಲ್ಲಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯೋರ್ವರು ಹೋಮ್ ವರ್ಕ್ ಮಾಡುವ ವಿಷಯವಾಗಿ ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿದೆ. ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ನಿಶ್ಚಯ್ (14) ಹಲ್ಲೆಗೊಳಗಾದವ ಎಂದು ತಿಳಿದು ಬಂದಿದೆ.
ವೆಂಕಟರಮಣ ಶಾಲೆಯ 8 ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿ ನಿಶ್ಚಯ್ ನೊಟ್ಸ್ ಬರೆದುಕೊಂಡು ಬಂದಿಲ್ಲ ಎಂದು ಶಿಕ್ಷಕಿ ರೇಖಾ ಶೆಟ್ಟಿ ಅವರು ವಿದ್ಯಾರ್ಥಿಗೆ ಐಡಿ ಕಾರ್ಡ್ ನ್ನು ಕೈಗೆ ಸುತ್ತಿಕೊಂಡು ಗುದ್ದಿ, ಪೆನ್ನಿಂದ ಕೈಗೆ ಚುಚ್ಚಿ ಗಾಯಗೊಳಿಸಿದ್ದರು ಎನ್ನಲಾಗಿದೆ.
ಈ ಹಿಂದೆಯೂ ಸಹ ಹಲವು ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಿರುವ ಘಟನೆ ತಿಳಿದು ಬಂದಿದೆ ತಿನ್ನಲಾಗುತ್ತಿದೆ!!
ಈ ಘಟನೆಯು ಬೆಳಿಗ್ಗೆ 10 ಗಂಟೆಗೆ ತರಗತಿಯಲ್ಲಿ ನಡೆದಿದ್ದು ಸಂಜೆ ತನಕ ವಿದ್ಯಾರ್ಥಿಗೆ ಯಾವುದೇ ಪ್ರಥಮ ಚಿಕಿತ್ಸೆ ನೀಡದೆ ಇರುವುದರಿಂದ ಗಂಭೀರ ನೋವಿನಿಂದ ಜ್ವರ ಬಂದು ಬಳಲುತ್ತಿದ್ದ. ವಿದ್ಯಾರ್ಥಿ ಮನೆಗೆ ಹೋದ ನಂತರ ಪೋಷಕರಿಗೆ ವಿಷಯ ತಿಳಿದು ವಿದ್ಯಾರ್ಥಿಯನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.
ವಿದ್ಯಾರ್ಥಿಯ ಪೋಷಕರು ಶಾಲೆ ಶಿಕ್ಷಕಿ ಹಾಗೂ ಆಡಳಿತ ಮಂಡಳಿಯವರನ್ನು ತರಾಟೆಗೆ ತೆಗೆದುಕೊಂಡಿರುತ್ತಾರೆ. ವಿದ್ಯಾರ್ಥಿಗೆ ಶಾಲೆಯಲ್ಲಿಯೇ ಜ್ವರ ಬಂದು ಬಳಲುತ್ತಿದ್ದರೂ ಶಾಲೆಯವರು ಗಮನ ಹರಿಸದ ಬಗ್ಗೆ ಪೋಷಕರು ಆಕ್ರೋಶಗೊಂಡಿದ್ದಾರೆ. ಪ್ರಕರಣ ಮುಂದುವರೆದರೆ ಶಾಲೆಯವರು ತಮ್ಮ ಘನತೆಗೆ ದಕ್ಕೆ ಬರಬಹುದೆಂದು ಕಾರಣದಿಂದ ವಿದ್ಯಾರ್ಥಿಯ ಪೋಷಕರ ಮನವೊಲಿಸಿ ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಮನವಲಿಸಿ ಶಾಲೆಯಲ್ಲಿ ಮಾತುಕತೆ ನಡೆಸಿ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲಾಯಿತು ಎಂದು
ತಿಳಿದುಬಂದಿದೆ.
ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು, ಹಾಗೂ ಜನಪ್ರತಿನಿಧಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನಹರಿಸಿ ಮಕ್ಕಳ ಮೇಲಾಗುತ್ತಿರುವ ಹಲ್ಲೆಯನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ
Leave a Reply