
ಉಡುಪಿ : ನಮ್ಮ ನಾಡ ಹಬ್ಬವಾದ ಕರ್ನಾಟಕ ರಾಜ್ಯೋತ್ಸವದ ಆಚರಣೆಯು ಜಿಲ್ಲಾ ಕಛೇರಿಯ ಮುಂಭಾಗದಲ್ಲಿ ಕೆಂಪು ಹಳದಿ ಬಾವುಟವನ್ನು ನಗರ ಸಭೆಯ ಪೌರಾ ಯುಕ್ತರಾದ ಶ್ರೀಯುತ ರಾಯಪ್ಪನವರು ಹಾಗೂ ರಾಜ್ಯ ಮಹಿಳಾ ಘಟಕದ ಗೌರವಧ್ಯಕ್ಷರಾದ ಶ್ರೀಮತಿ ಸಿ ಸಿ ಹೇಮಲತಾ ಅವರು ಧ್ವಜಾರೋಹಣ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇವರೊಂದಿಗೆ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರು, ಜಿಲ್ಲಾ ಮಹಿಳಾ ಅಧ್ಯಕ್ಷರಾದ ಗೀತಾ ಪಾಂಗಾಳ, ಗೌರವಧ್ಯಕ್ಷರಾದ ಸುಂದರ ಎ ಬಂಗೇರ ಹಾಗೂ ಜಿಲ್ಲಾ ಪದಾಧಿಕಾರಿಗಳು ಸರ್ವ ಸದಸ್ಯರು, ತಾಲೂಕು ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಿದರು. ತದನಂತರ ಜಿಲ್ಲಾ ಕಛೇರಿ ಯಲ್ಲಿ ಬಂದ ಮುಖ್ಯ ಅತಿಥಿಗಳನ್ನು ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿ ಸ್ವಾಗತಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಯುತ ರಾಯಪ್ಪನವರು ಸಭೆಯನ್ನುದ್ದಿಸಿ ಕನ್ನಡ ನಾಮಫಲಕದ ವಿಷಯದ ಕುರಿತು, ನಾವು ಯಾವ ಊರಿಗೆ ಹೋದರು ನಮ್ಮ ಕನ್ನಡ ಭಾಷೆಯನ್ನು ಮರೆಯಬಾರದು, ಕನ್ನಡಕ್ಕೆ ಮೊದಲು ಆದ್ಯತೆ ಕೊಡಬೇಕು ಎಂದು ಸಭೆಯಲ್ಲಿ ತಮ್ಮ ಎರಡು ಹಿತ ನುಡಿಗಳನ್ನು ನೀಡಿದರು.
ರಾಜ್ಯ ಮಹಿಳಾ ಘಟಕದ ಗೌರವದಕ್ಷರಾದ ಶ್ರೀಮತಿ ಸಿ.ಸಿ ಹೇಮಲತಾ ಅವರು ಸಭೆಯನ್ನುದ್ದೇಶಿಸಿ ಮಹಿಳೆಯರಿಗೆ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ರಾಣಿ ಅಬ್ಬಕ್ಕ ಅಂತಹ ಹಲವಾರು ವೀರ ಮಹಿಳೆಯರು ಹುಟ್ಟಿದಂತ ನಾಡು. ಅಂತ ನಾಡಲ್ಲಿ ಇದ್ದು ನಾವು ಕೂಡ ಅವರಂತೆ ಆಗಬೇಕು. ನದಿಗಳಿಗೆ ಹೆಣ್ಣಿನ ಹೆಸರನ್ನೇ ಇಟ್ಟಿದ್ದಾರೆ, ಪ್ರತಿಯೊಂದು ಹೆಣ್ಣಿಗೂ ಅವರದೇ ಸ್ಥಾನಮಾನ ಇರುತ್ತದೆ. ಹೆಣ್ಣು ಮನಸು ಮಾಡಿದರೆ ಏನನ್ನು ಮಾಡಬಹುದು ಹಾಗಿರುವಾಗ ನಮ್ಮ ರಕ್ಷಣಾ ವೇದಿಕೆ ಪ್ರತಿಯೊಬ್ಬ ಮಹಿಳೆಯರು ಯಾರಿಗೂ ಅಂಜದೆ ಕೆಲಸ ಕಾರ್ಯಗಳನ್ನು ಮಾಡುವುದರಲ್ಲಿ ಯಶಸ್ವಿಯಾಗಬೇಕು.
ಎಲ್ಲ ಭಾಷೆಯನ್ನು ನಾವು ಗೌರವಿಸುತ್ತೇವೆ. ಆದರೆ ಕನ್ನಡ ನಾಡಲ್ಲಿ ಹುಟ್ಟಿ ಕನ್ನಡಕ್ಕೆ ಮೊದಲ ಆದ್ಯತೆಯನ್ನು ನಾವು ಕೊಡುತ್ತೇವೆ. ಸಂಘಟನೆಯನ್ನು ಒಳ್ಳೆ ರೀತಿಯಲ್ಲಿ ಕಟ್ಟಿಕೊಂಡು ಹೋಗಬೇಕು. ಗೊಂದಲ ಎಂದು ಬಂದರೆ ಅದನ್ನು ತಲೆಕೆಡಿಸಿಕೊಳ್ಳದೆ ತಮಗೆ ಕೊಟ್ಟಂತ ಹುದ್ದೆಗೆ ತಕ್ಕ ಹಾಗೆ ಕೆಲಸ ಮಾಡಿಕೊಂಡು ಹೋಗಬೇಕು. ಹಲವಾರು ತಮ್ಮ ಅನಿಸಿಕೆ ಮಾತುಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರು ನಾವೆಲ್ಲಾ ಎಲ್ಲಾ ಭಾಷೆಗಳನ್ನು ಗೌರವಿಸುತ್ತೇವೆ. ಆದರೆ ಕನ್ನಡ ನಮಗೆ 365 ದಿನ ಕನ್ನಡ ರಾಜ್ಯೋತ್ಸವ ಆಗಿರುತ್ತದೆ. ಒಂದು ದಿನದ ಸೀಮಿತವಲ್ಲ. ಕನ್ನಡ ರಾಜೋತ್ಸವ ಪ್ರತಿದಿನ ಕನ್ನಡ ಪರವಾಗಿ ಆಚರಿಸುತ್ತಾ ಇರುತ್ತೇವೆ. ನಮ್ಮ ಕನ್ನಡ ವಿಷಯಕ್ಕೆ ತೊಂದರೆ ಕೊಟ್ಟಲ್ಲಿ ಕನ್ನಡ ಪರವಾಗಿ ಹೋರಾಟ ಮಾಡುವುದು ಖಚಿತ ಹಾಗೂ ಉಡುಪಿಯಲ್ಲಿ ಜಿಲ್ಲೆಯಲ್ಲಿ ಕನ್ನಡಕ್ಕೆ ಮೊದಲ ಆದತ್ತೆಯನ್ನು ಸಹಕರಿಸಬೇಕು, ಎಲ್ಲದಕ್ಕೂ ಕನ್ನಡ ಮೊದಲನೇ ಒಂದು ಸ್ಥಾನದಲ್ಲಿ ಇರಬೇಕು ಎಂದು ಜಿಲ್ಲಾಧ್ಯಕ್ಷರು ಸುಜಯ್ ಪೂಜಾರಿ ತಿಳಿಸಿದರು.. ಈ ಸಂದರ್ಭದಲ್ಲಿ ಜಿಲ್ಲಾ ಗೌರರಾಧ್ಯಕ್ಷರದ ಸುಂದರ ಎ ಬಂಗೇರ. ಜಿಲ್ಲಾ ಮಹಿಳಾಧ್ಯಕ್ಷರು ಗೀತ ಪಂಗಳಾ. ಜಿಲ್ಲಾ ಉಪಾಧ್ಯಕ್ಷರಾದ ಸಂತೋಷ್ ಕುಲಾಲ್, ಜಿಲ್ಲಾ ಸಲಹೆಗಾರದ ಪ್ರಕಾಶ್ ದೇವಾಡಿಗ, ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾದ ಅಲ್ಫೋನ್ಸ್ , ಗೋಪಾಲ್ ದೊರೆ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣಕುಮಾರ್, ಜಿಲ್ಲಾ ಕಾರ್ಯದರ್ಶಿ ಗಣೇಶ ಶೆಟ್ಟಿಗಾರ್, ಜಿಲ್ಲಾ ಮಹಿಳಾ ಉಪಾಧ್ಯಕ್ಷರಾದ ದೇವಕಿ ಬಾರ್ಕೂರ್, ಶಾಲಿನಿ,ಜಿಲ್ಲಾ ಮಹಿಳಾ ಜಾಲತಾಣ ಸಂಚಾಲಕಿ ರಶ್ಮಿ,,ಜಿಲ್ಲಾ ಮಹಿಳಾ ಕಾರ್ಯದರ್ಶಿಯಾದ ಚಂದ್ರಕಲಾ, ಮೋಹಿನಿ, ಜಿಲ್ಲಾ ಮಹಿಳಾ ಸಾಂಸ್ಕೃತಿಕ ಕಾರ್ಯದರ್ಶಿಯಾದ ಆಶಾ, ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಸ್ಟಾನಿ ಡಿಸೋಜಾ, ಕಾಪು ತಾಲೂಕು ಮಹಿಳಾ ಅಧ್ಯಕ್ಷರಾದ ಶಶಿಕಲಾ ನವೀನ್, ಹಾಗೂ ಪದಾಧಿಕಾರಿಗಳು, ಜಿಲ್ಲಾ ಸರ್ವ ಸದಸ್ಯರು ಉಪಸ್ಥಿತರಿದ್ದರು.
Leave a Reply