News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ- ಹೃದ್ರೋಗ ತಜ್ಞೆ  ಡಾ. ಪ್ರಭಾವತಿ ಅವರಿಂದ ಮಾಹಿತಿ ಮತ್ತುಸಂವಾದ ಕಾರ್ಯಕ್ರಮ

ಕೋಟ: ಇತ್ತೀಚೆಗೆ ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಕೂಟ ಬಂದು ಭವನದಲ್ಲಿ ಮಹಿಳಾ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ  ಸಾಲಿಗ್ರಾಮ ಅಂಗ ಸಂಸ್ಥೆ ಏರ್ಪಡಿಸಿದ್ದ  ನಮ್ಮ ಹೃದಯ ನಾವೆಷ್ಟು ಬಲ್ಲೆವು ಎನ್ನುವ ವಿನೂತನ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸುಪ್ರಸಿದ್ಧ ಜಯದೇವ ಹೃದ್ರೋಗ ಆಸ್ಪತ್ರೆ, ಖ್ಯಾತ ತಜ್ಞೆ ಡಾ ಪ್ರಭಾವತಿ  ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಹೃದಯ, ಹೃದ್ರೋಗ ,ಹೃದಯಘಾತ ,ಇವುಗಳ ಸೂಕ್ಷ÷್ಮ ಮಾಹಿತಿ, ದೃಶ್ಯ ಮಾಧ್ಯಮ ಮೂಲಕ ವಿವರಿಸಿದರು. ಹಾಗೂ ಸಭೆಯಲ್ಲಿದ್ದವರ ಪ್ರಶ್ನೆಗಳಿಗೆ ಸಂವಾದ ಮೂಲಕ ಸೂಕ್ತ ಮಾಹಿತಿನೀಡಿದರು.

ಈ ಸಂದರ್ಭದಲ್ಲಿ ಹೃದ್ರೋಗ ತಜ್ಞೆ  ಡಾ ಪ್ರಭಾವತಿ ಹಾಗೂ ಜಯದೇವ ಆಸ್ಪತ್ರೆಯ ಕಾರ್ಡಿಯಾಲಿಜಿಸ್ಟ್ ಡಾ ಮಧುಕರ ಅವರನ್ನು ವಿಶೇಷವಾಗಿ ಮಹಿಳಾ ವೇದಿಕೆ ವತಿಯಿಂದ ಗೌರವಿಸಲಾಯಿತು .

ಕಾರ್ಯಕ್ರಮದಲ್ಲಿಕೂಟಮಹಾಜಗತ್ತು ಅಂಗಸAಸ್ಥೆಯ ಅಧ್ಯಕ್ಷ ಪಿ.ಸಿ .ಹೊಳ್ಳ, ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ತುಂಗ ,ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಯ್ಯ, ಗೆಳೆಯರ ಬಳಗದ ತಾರಾನಾಥ ಹೊಳ್ಳ, ಶ್ರೀನಿವಾಸ ಉಪಾಧ್ಯ, ಚಂದ್ರಶೇಖರನಾವಡ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ .ಸಿ. ಹೊಳ್ಳ ಸ್ವಾಗತಿಸಿ , ರೇವತಿ  ಐತಾಳ, ಪರಿಚಯಿಸಿದರು. ಕಾರ್ಯದರ್ಶಿ ಲತಾ ಹೊಳ್ಳ ವಂದಿಸಿದರು.ಕೋಶಾಧಿಕಾರಿ ಪೂರ್ಣಿಮ ಅಧಿಕಾರಿ ನಿರುಪಿಸಿದರು.

ಇತ್ತೀಚೆಗೆ ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಕೂಟ ಬಂದು ಭವನದಲ್ಲಿ ಮಹಿಳಾ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ  ಸಾಲಿಗ್ರಾಮ ಅಂಗ ಸಂಸ್ಥೆ ಏರ್ಪಡಿಸಿದ್ದ  ನಮ್ಮ ಹೃದಯ ನಾವೆಷ್ಟು ಬಲ್ಲೆವು ಎನ್ನುವ ವಿನೂತನ ಕಾರ್ಯಕ್ರಮದಲ್ಲಿ ಹೃದ್ರೋಗ ತಜ್ಞೆ  ಡಾ ಪ್ರಭಾವತಿ ಸನ್ಮಾನಿಸಲಾಯಿತು. ್ಲಕೂಟಮಹಾಜಗತ್ತು ಅಂಗಸAಸ್ಥೆಯ ಅಧ್ಯಕ್ಷ ಪಿ.ಸಿ .ಹೊಳ್ಳ, ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ತುಂಗ ,ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಯ್ಯ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *