• Sat. Mar 22nd, 2025

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಮಾಜಿ ಮುಖ್ಯಮಂತ್ರಿ ಸಜ್ಜನ ರಾಜಕಾರಣಿ ಎಸ್. ಎಂ. ಕೃಷ್ಣ (92) ವಿಧಿವಶ

ByKiran Poojary

Dec 10, 2024

ಕರ್ನಾಟಕ ಕಂಡ ಅಪರೂಪದ ರಾಜಕಾರಣಿ, ಹಿರಿಯ ಮುತ್ಸದ್ದಿ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿಯೂ, ಕೇಂದ್ರ ಸರ್ಕಾರದ ಹಣಕಾಸು ಸಚಿವರಾಗಿಯೂ, ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯದ 10 ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಮುಖ್ಯಮಂತ್ರಿ ಅವಧಿಯಲ್ಲಿ ಬೆಂಗಳೂರು ನಗರವನ್ನು ಸಿಂಗಾಪುರ್ ನಂತೆ ಅಭಿವೃದ್ಧಿಯ ಕನಸ್ಸು ಕಂಡಿದ್ದು ಇತಿಹಾಸ. ಮುಖ್ಯಮಂತ್ರಿ ಕಾಲದ ಅವಧಿಯಲ್ಲಿ ಅನೇಕ ಸಮಸ್ಯೆಯನ್ನೂ ಚಾಣಕ್ಯ ರೀತಿಯಲ್ಲಿ ಬಗೆಹರಿಸಿದ್ದರು. ಕಾವೇರಿ ನದಿ ಗಲಾಟೆ, ವೀರಪ್ಪನ್ ಡಾ. ರಾಜಕುಮಾರ್ ಅಪಹರಣ ಪ್ರಕರಣಗಳು ಸುಖಾ0ತ್ಯ ಕಂಡಿದ್ದೂ ಅವರ ಬುದ್ದಿವಂತಿಕೆಗೆ ಉದಾಹರಣೆ. ಬೆಂಗಳೂರು ಐಟಿಬಿಟಿ ಕಂಪನಿಗಳು ತೆರೆದು ಅಭಿವೃದ್ಧಿಯತ್ತ ಸಾಕಷ್ಟು ಶ್ರಮಕ್ಕೆ ಕಾರಣಿಭೂತರಾಗಿ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ.*

ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ (92) ರವರು ತಡರಾತ್ರಿ 02:45 ಕ್ಕೆ ವಯೋಸಹಜ ಖಾಯಿಲೆಯಿಂದ ಬಾರದ ಲೋಕಕ್ಕೆ ಪಯಣ ಮಿಡಿಯುತ್ತಿದೆ ಕಂಬನಿಗಳು

Leave a Reply

Your email address will not be published. Required fields are marked *