News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಸಿ.ಮಂಜುನಾಥ್ ಉಪಾಧ್ಯ ಬೀಳ್ಕೊಡುಗೆ

ಕೋಟ: ವಿವೇಕ ವಿದ್ಯಾ ಸಂಸ್ಥೆಗಳಲ್ಲಿ ಸಂಸ್ಕೃತ ಅಧ್ಯಾಪಕರಾಗಿ, ಉಪನ್ಯಾಸಕರಾಗಿ 28 ವರ್ಷಗಳ ಕಾಲ ದೀರ್ಘ ಸೇವೆಯನ್ನು ಸಲ್ಲಿಸಿ ಇಲಾಖೆಯ ನಿಯಮದಂತೆ ಸೇವಾ ನಿವೃತ್ತಿಯನ್ನು ಹೊಂದಿದ ಸಿ.ಮಂಜುನಾಥ್ ಉಪಾಧ್ಯ ಇವರನ್ನು ಕೋಟ ವಿದ್ಯಾಸಂಘ ಇದರ ಆಡಳಿತ ಮಂಡಳಿಯಿoದ ಮತ್ತು ವಿದ್ಯಾ.ಸಂಸ್ಥೆಗಳ ಸಿಬ್ಬಂದಿ ವರ್ಗದವರ ಸಂಯುಕ್ತ ಆಶ್ರಯದಲ್ಲಿ ಪುರಸ್ಕರಿಸಿ ವಿದಾಯವನ್ನು ಕೋರಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ ಅಧ್ಯಕ್ಷರಾದ ಸಿ.ಎ ಪಿ. ಪ್ರಭಾಕರ ಮಯ್ಯ ವಹಿಸಿ ನಿವೃತ್ತರ
ಕುರಿತಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ವಿದ್ಯಾ ಸಂಘದ ಕಾರ್ಯದರ್ಶಿ ಎಂ.ರಾಮದೇವ ಐತಾಳ ಹಾಗೂ ಕೋಶಾಧಿಕಾರಿ ವೆಲೇರಿಯನ್ ಮೆನೇಜಸ್ ನಿವೃತ್ತರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.
ಶಿಕ್ಷಕರಾದ ಸಂಜೀವ ಜಿ, ವೆಂಕಟೇಶ ಉಡುಪ, ಮುಖ್ಯೋಪಾಧ್ಯಯ ಜಗದೀಶ ಹೊಳ್ಳ ಇವರು ನಿವೃತ್ತರ
ಕುರಿತಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಪುರಸ್ಕಾರವನ್ನು ಸ್ವೀಕರಿಸಿ ಮಂಜುನಾಥ ಉಪಾಧ್ಯರು ತಮ್ಮ ಸೇವಾ ಅನುಭವವನ್ನು ಹಂಚಿಕೊoಡರು.

ಪ್ರಾoಶುಪಾಲರಾದ ಜಗದೀಶ ನಾವಡ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು. ಕಚೇರಿ ಸಹಾಯಕಿ ಸಹನಾ ಪ್ರಾರ್ಥಿಸಿದರು. ಪ್ರೇಮಾನಂದ ವಂದಿಸಿ, ಚಂದ್ರಶೇಖರ್ ಹೆಚ್ ಎಸ್ ಕಾರ್ಯಕ್ರಮ ನಿರ್ವಹಿಸಿದರು. ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಸಿ.ಮಂಜುನಾಥ್ ಉಪಾಧ್ಯ ಬೀಳ್ಕೊಡುಗೆ ನೀಡಿ ಗೌರವಿಸಲಾಯಿತು. ವಿದ್ಯಾ ಸಂಘದ ಕಾರ್ಯದರ್ಶಿ ಎಂ.ರಾಮದೇವ ಐತಾಳ, ಕೋಶಾಧಿಕಾರಿ ವೆಲೇರಿಯನ್ ಮೆನೇಜಸ್, ಪ್ರಾಂಶುಪಾಲರಾದ ಜಗದೀಶ ನಾವಡ
ಮತ್ತಿತರರು ಇದ್ದರು.

Leave a Reply

Your email address will not be published. Required fields are marked *