News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಲ್ಲಟ್ಟು ದೇಗುಲದಲ್ಲಿ ಮಹಾಶಿವರಾತ್ರಿ ಉತ್ಸವ, ಸಂಸದ ಕೋಟ ಭೇಟಿ

ಕೋಟ: ಇಲ್ಲಿನ ಕೋಟದ ಗಿಳಿಯಾರಿನ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಿದವು..ದೇಗುಲ ಮುಖ್ಯ ಅರ್ಚಕ ಸುಧೀರ್ ಐತಾಳ್
ಧಾರ್ಮಿಕ ಕೈಂಕರ್ಯನೆರವೆರಿಸಿದರು.

ಮಹಾಶಿವರಾತ್ರಿ ಅಂಗವಾಗಿ ಮಹಾರುದ್ರಾಭಿಷೇಕ, ಅಗಲು ರಂಗಪೂಜೆ ಕಾರ್ಯಕ್ರಮಗಳು ಜರಗಿತು. ವಿವಿಧ ಭಜನಾ ತಂಡಗಳಿoದ ಭಜನಾ ಕಾರ್ಯಕ್ರಮ ನೆರವೆರಿತು. ಶಿವರಾತ್ರಿ ಉತ್ಸವದ ಅಂಗವಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ದೇಗುಲಕ್ಕೆ ಭೇಟಿ
ನೀಡಿದರು.

ಈ ಸಂದರ್ಭದಲ್ಲಿ ದೇಗುಲಆಡಳಿತ.ಮಂಡಳಿ ಶಾಲು ಹೋದಿಸಿ ಪ್ರಸಾದ ನೀಡಿ.ಗೌರವಿಸಿದರು. ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಶೇವಧಿ ಸುರೇಶ್.ಗಾಣಿಗ, ಕಾರ್ಯದರ್ಶಿ ಹರೀಷ್ ದೇವಾಡಿಗ, ಸಿದ್ಧ ದೇವಾಡಿಗ, ಬಾಬು ಶೆಟ್ಟಿ, ಶೇಖರ್ ದೇವಾಡಿಗ,ತಿಮ್ಮ ಕಾಂಚನ್, ಶೇವಧಿ ನಾಗರಾಜ್ ಗಾಣಿಗ, ,ಶಾಂತಾ ಪ್ರಕಾಶ್ ಮತ್ತಿತರರು ಇದ್ದರು. ಇಲ್ಲಿನ ಕೋಟದ ಗಿಳಿಯಾರಿನ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಅಂಗವಾಗಿ.ಸoಸದ ಕೋಟ ಶ್ರೀನಿವಾಸ ಪೂಜಾರಿ ದೇಗುಲಕ್ಕೆ ಭೇಟಿ ನೀಡಿದರು. ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಕಾರ್ಯದರ್ಶಿ ಹರೀಷ್ ದೇವಾಡಿಗ, ಸಿದ್ಧ ದೇವಾಡಿಗ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *