
ಅಧಿಕಾರಿಗಳು & ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯೇ ಮೇಲ್ಧರ್ಜೆಗೆ ಸಮುದಾಯ ಅರೋಗ್ಯ ಕೇಂದ್ರವಾಗದೇ ಇನ್ನೂ ಪ್ರಾಥಮಿಕ ಅರೋಗ್ಯ ಕೇಂದ್ರ ಆಗಿರುವುದೇ ಕಾಲದ ವಿಪರ್ಯಾಸ
ತಾಳಗುಪ್ಪ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ ಅರೋಗ್ಯ ಕೇಂದ್ರವೂ ತಾಳಗುಪ್ಪ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರನ್ನೂ ಮಾತ್ರವಲ್ಲದೆ ಕಾರವಾರ ಜಿಲ್ಲೆಯ ಸಿದ್ದಾಪುರದ ಮನ್ಮನೆ, ಹಸುವಂತೆ, ನೆಜ್ಜುರು ಗ್ರಾಮಗಳಿಂದ ದಿನನಿತ್ಯ ನೂರಾರು ರೋಗಿಗಳು ತಾಳಗುಪ್ಪ ಪ್ರಾಥಮಿಕ ಅರೋಗ್ಯ ಕೇಂದ್ರವನ್ನೇ ಅವಲಂಬನೆಯಾಗಿದ್ದೂ, ವೈದ್ಯರುಗಳು ಔಷಧಿಗಳ ಕೊರತೆ ಎದ್ದು ತೋರುತ್ತಿದೆ.
ಸಮುದಾಯ ಅರೋಗ್ಯ ಕೇಂದ್ರಕ್ಕೆ ವ್ಯವಸ್ಥಿತವಾಗಿ ಎಲ್ಲಾ ರೀತಿಯಲ್ಲಿ ಕೊಠಡಿ ವ್ಯವಸ್ಥೆ ಸಹಿತ ಸಂಪೂರ್ಣ ಸೌಕರ್ಯ ಹೊಂದಿರುವ ಈ ಸರ್ಕಾರಿ ಆಸ್ಪತ್ರೆಯನ್ನೂ ಅಂದಿನ ಅರೋಗ್ಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ರವರ ಅಭಿವೃದ್ಧಿ ಚಿಂತನೆ ನಿಜಕ್ಕೂ ಹೆಮ್ಮೆಯ ಸಂಗತಿ
ಈಗಿನ ಅಧಿಕಾರಿಗಳು & ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ತಾಳಗುಪ್ಪ ಪ್ರಾಥಮಿಕ ಅರೋಗ್ಯ ಕೇಂದ್ರ ಸಮುದಾಯ ಅರೋಗ್ಯ ಕೇಂದ್ರಕ್ಕೆ ಮೇಲ್ದರ್ಜೆಗೆ ಕಾಣಡಿರುವ ಬಗ್ಗೆ ತಾಳಗುಪ್ಪ ಹೋಬಳಿಯ ಸುತ್ತಮುತ್ತಲಿನ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿರುವುದು ಕಂಡು ಬಂದಿದೆ
✍🏻 @ ಓಂಕಾರ ಎಸ್. ವಿ. ತಾಳಗುಪ್ಪ
Leave a Reply