
“ಡಾ.ಭೀಮ್ರಾವ್ ಅಂಬೇಡ್ಕರ್ ಅವರು ಅಸ್ಪೃಶ್ಯತೆಯಿಂದ ಜೀವನದುದ್ದಕ್ಕೂ ಅನುಭವಿಸಿದ ಅವಮಾನಗಳು, ಸಾಮಾಜಿಕ ಪಿಡುಗಿನಿಂದ ದಲಿತ ಸಮಾಜವನ್ನು ಮೇಲೆತ್ತುವ ಕಿಚ್ಚನ್ನು ಹೊತ್ತಿಸಿತು. ತಮ್ಮ ಅನುಯಾಯಿಗಳೊಂದಿಗೆ ಮಹಾಡದ ಚೌಡಾರ್ ಕೆರೆಯ ನೀರನ್ನು ಸ್ಪರ್ಶಿಸುವುದರ ಮೂಲಕ ಅಸ್ಪೃಶ್ಯತೆಯ ವಿರುದ್ಧದ ಚಳುವಳಿಯನ್ನು ಪ್ರಾರಂಭಿಸಿ, ನಾಸಿಕ್ನ ಕಾಳರಾಮ ದೇವಳದ ಪ್ರವೇಶ, ಮಹಿಳೆಯರ ವಿರುದ್ಧದ ತಾರತಮ್ಯದ ಆಚರಣೆಗಳ ವಿರುದ್ಧದ ಹೋರಾಟ ಮುಂತಾದವುಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. ನೆಹರೂರವರ ಸರ್ಕಾರದಲ್ಲಿ ಕಾನೂನು ಮಂತ್ರಿಯಾಗಿ ಸ್ವತಂತ್ರ ಭಾರತದ ಸಂವಿಧಾನದ ಕರಡನ್ನು ಸಿದ್ಧಪಡಿಸಿದ ಹೆಗ್ಗಳಿಕೆ ಅಂಬೇಡ್ಕರ್ ಅವರದ್ದು” ಎಂದು ಕುಂದಾಪುರ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಮತ್ತು ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ವಿಜೇತೆ ಶ್ರೀಮತಿ ಆಶಾದೇವಿ ಕೇಶವ
ನಾಯಕ ಅವರು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಶಂಕರನಾರಾಯಣದಲ್ಲಿ ಅಂಬೇಡ್ಕರ್ ಜಯಂತಿ ದಿ ನಾಚರಣೆಯ ಪ್ರಯುಕ್ತ ಐಕ್ಯೂಎಸಿ ಮತ್ತು ರಾಷ್ಟಿçÃಯ ಸೇವಾ ಯೋಜನೆಯ ಸಹಯೋಗದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು “ಅಂಬೇಡ್ಕರ್ – ಜೀವನ ಸಾಧನೆ ಪ್ರೇರಣೆ” ವಿಷಯದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ವೆAಕಟರಾಮ್ ಭಟ್ ವಹಿಸಿ, ಇವತ್ತಿನ ಸಮಾಜದಲ್ಲಿ ಹಣದಿಂದ ಬಡವ ಮತ್ತು ಸ್ಥಿತಿವಂತರ ನಡುವಿನ ಅಸ್ಪೃಶ್ಯತೆ ಹೆಚ್ಚಾಗುತ್ತಿದೆ ಮತ್ತು ಅದರಿಂದ ಉoಟಾಗುವ ಕೀಳರಿಮೆಯನ್ನು ಹೋಗಲಾಡಿಸುವುದು ಶಿಕ್ಷಣದಿಂದ ಸಾಧ್ಯವಿದ್ದು, ವಿದ್ಯಾರ್ಥಿಗಳೆಲ್ಲರೂ ಉತ್ತಮ ಶಿಕ್ಷಣ ಪಡೆದು ಅಂಬೇಡ್ಕರ್ ಅವರ ಆಶಯದಂತೆ ಎಲ್ಲಾ ರೀತಿಯ ಅಸ್ಪೃಶ್ಯತೆಯನ್ನು ಸಮಾಜದಿಂದ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಹೇಳಿದರು.
ಪ್ರಥಮ ಬಿ.ಬಿ.ಎ ವಿದ್ಯಾರ್ಥಿನಿ ಕು.ಪೂಜಾ ಅಂಬೇಡ್ಕರ್ ಅವರ ಜೀವನದ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಗಿರೀಶ್ ಶ್ಯಾನುಭೋಗ್, ಐಕ್ಯೂಎಸಿ ಸಂಚಾಲಕ ಡಾ.ವಸಂತ್ ಜಿ., ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀ ರಾಮಚಂದ್ರ ಜಿ.ಎಸ್. ಮತ್ತು ಕು.ಪ್ರಜ್ಞಾ ಉಪಸ್ಥಿತರಿದ್ದರು. ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿನಿ ಕು.ಮಾನ್ಯ ಜೆ.ಕೆ ಕಾರ್ಯಕ್ರಮವನ್ನು ನಿರೂಪಿಸಿ, ಕು.ಮನವಿ ಜೆ.ಕೆ, ದ್ವಿತೀಯ ಬಿ.ಸಿ.ಎ ಇವರು ಸಂಪನ್ಮೂಲ ವ್ಯಕ್ತಿ ಪರಿಚಯ ಮಾಡಿದರು. ಪ್ರಥಮ ಬಿ.ಎ. ವಿದ್ಯಾರ್ಥಿನಿ ಕು.ಅಕ್ಷತಾ ಸ್ವಾಗತಿಸಿ, ಪ್ರಥಮ ಬಿ.ಸಿ.ಎ ವಿದ್ಯಾರ್ಥಿನಿ ಕು.ಬಿಂದು ವಂದಿಸಿದರು.
Leave a Reply