News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ಮೂರು ವಾರಗಳ ಕಾಲ ನಡೆದ ವಸಂತ ವೇದ ಶಿಬಿರ ಸಮಾರೋಪ
ವೇದ ಶಿಬಿರಗಳಿಂದ ಮೌಲ್ಯ ವರ್ಧಿತ ಜೀವನ -ಡಾ.ಕಾರಂತ.    

ಕೋಟ: ಇವತ್ತಿನ ಸಂಕೀರ್ಣ ಕಾಲಘಟ್ಟದಲ್ಲಿ ಸಹಕಾರ, ಸಹಚರ್ಯ,ಸಹಬಾಳ್ವೆ,ಸಹಿಷ್ಣುತೆಗಳನ್ನು ಒಳಗೊಂಡ ಸಂಸ್ಕಾರಯುತ ಬದುಕಿಗೆ ಶ್ರೀ ದೇವಳದ ವತಿಯಿಂದ ಮೂರು ವಾರಗಳ ನಡೆದ ವಸಂತ ವೇದ ಶಿಬಿರವು ಸೂಕ್ತ ವೇದಿಕೆ ಕಲ್ಪಿಸಲಿದೆ ಎಂದು  ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ನುಡಿದರು.

ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ಮೂರು ವಾರಗಳ ಕಾಲ ನಡೆದ ವಸಂತ ವೇದ ಶಿಬಿರಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಶಿಬಿರಾರ್ಥಿಗಳ ವೇದ ಘೋಷದಿಂದ ಆರಂಭಗೊAಡ ಸಮಾರಂಭದಲ್ಲಿ ದೇಗುಲದ ಪ್ರಬಂಧಕ ನಾಗರಾಜ ಹಂದೆ ಸ್ವಾಗತಿಸಿ ,ಸಹ ಪ್ರಬಂಧಕ ಗಣೇಶ ಭಟ್ಟ ಶಿಬಿರದ ವರದಿಯನ್ನು ಮಂಡಿಸಿದರು.  ಕೂಟ ಮಹಾ  ಜಗತ್ತಿನ ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ  ವಿದ್ಯಾರ್ಥಿಗಳ ಧೀಶಕ್ತಿಯನ್ನು ಉದ್ದೀಪಸುವತ್ತ ಶಿಬಿರದ ಪಾತ್ರವನ್ನು ವಿವರಿಸಿದರು.

ದೇಗುಲದ  ಕೋಶಾಧಿಕಾರಿ ಪರಶುರಾಮ ಭಟ್ಟ ಶಿಬಿರವನ್ನು ನಡೆಸುವ ಸಾಧಕ ಬಾಧಕಗಳನ್ನು ಮನಮುಟ್ಟುವಂತೆ ಪೋಷಕರಿಗೆ ವಿವರಿಸುವುದರೊಂದಿಗೆ ಮನೆ ಮನೆಯಲ್ಲಿ ಉಪನೀತ ಸಂಸ್ಕಾರವನ್ನು ಪೋಷಿಸುವ ಅಗತ್ಯತೆಯ ಬಗ್ಗೆ ತಿಳಿ ಹೇಳಿದರು.  ಶಿಬಿರಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲು ನಿಗಮಾಗಮ ಶಾಲೆಯ ಅಧ್ಯಾಪಕ ವಾದಿರಾಜ ಐತಾಳ ಸಹಕರಿಸಿದರು.

ಋಗ್ವಿಲಾಸ ಭಟ್ಟ, ಯಶಸ್ಕರ ಉಪಾಧ್ಯ ವಟುಗಳ ಮತ್ತು ಬೆಂಗಳೂರಿನ ಜಯಕರ ಉಪಾಧ್ಯ ಪೋಷಕರ ಅನಿಸಿಕೆಯನ್ನು ಅಭಿವ್ಯಕ್ತಿಸಿದರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಪೂರ್ವ ಅಧ್ಯಕ್ಷ ಎ.ಜಗದೀಶ ಕಾರಂತ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯ ತಾರಾನಾಥ ಹೊಳ್ಳ , ಸಾಲಿಗ್ರಾಮ ಅಂಗಸAಸ್ಥೆಯ ಅಧ್ಯಕ್ಷ ಪಿ.ಸಿ.ಹೊಳ್ಳ ಮುಂತಾದವರು ಉಪಸ್ಥಿತರಿದ್ದರು. ಗ್ರಾಮ ಮೊಕ್ತೇಸರ ಮಹಾಬಲ ಹೇರ್ಳೆ ವಂದನಾರ್ಪಣೆ ಮತ್ತು ಸಾಮೂಹಿಕ ಐಕ್ಯ ಮಂತ್ರ ಪಠಣದೊಂದಿಗೆ  ಸಂಪನ್ನಗೊAಡ  ಸಮಾರಂಭದ ನಂತರ ಅಪರೇಶನ್ ಸಿಂಧೂರ ಮತ್ತು ರಾಷ್ಟç ಶ್ರೇಯಸ್ಸಿಗಾಗಿ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

Leave a Reply

Your email address will not be published. Required fields are marked *