
ಕೋಟ: ಇತ್ತೀಚಿಗಿನ ವರ್ಷಗಳಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಅಲ್ಲದೆ ಅಲ್ಲಿ ಕಲಿತ ವಿದ್ಯಾರ್ಥಿ ಸಾಧನೆ ಕೂಡಾ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಅದಕ್ಕಾಗಿ ಪ್ರತಿವೊರ್ವ ಪೋಷಕರು ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಿ ಎಂದು ಡಾ.ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಮುಖ್ಯಸ್ಥ ನಾಡೋಜ ಡಾ.ಜಿ ಶಂಕರ್ ಕರೆ ನೀಡಿದರು.
ಶನಿವಾರ ಕೋಟದ ಮಣೂರು ಪಡುಕರೆ ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಪ್ರಾಥಮಿಕ ಶಾಲಾ ಕೆ.ಸಿ ಕುಂದರ್ ಸಭಾಭವನದಲ್ಲಿ ಗೀತಾನಂದ ಫೌಂಡೇಶನ್ ವತಿಯಿಂದ ಆನಂದೋತ್ಸವ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳು ಮಂಚೂಣಿಗೆ ನಿಲ್ಲುತ್ತದೆ ಅದರಲ್ಲೂ ನಮ್ಮ ಟ್ರಸ್ಟ್ ಹಾಗೂ ಆನಂದ್ ಸಿ ಕುಂದರ್ ರವರ ಗೀತಾನಂದ ಟ್ರಸ್ಟ್ ಶೈಕ್ಷಣಿಕ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿವೆ,ಗ್ರಾಮೀಣ ಭಾಗದಲ್ಲಿ ಒಂದು ಸರಕಾರಿ ಶಾಲೆಯನ್ನು ಈ ಹಂತದಲ್ಲಿ ಅಭಿವೃದ್ಧಿ ಪಡಿಸುವುದೆಂದರೆ ಸುಲಭದ ಮಾತಲ್ಲ ಈ ದಿಸೆಯಲ್ಲಿ ಗೀತಾನಂದ ಫೌಂಡೇಶನ್ ಸಾಮಾಜಿಕ ಕಾರ್ಯವನ್ನು ಸಭೆಯಲ್ಲಿ ಕೊಂಡಾಡಿದರು.
ಗೀತಾನAದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಅಧ್ಯಕ್ಷತೆ ವಹಿಸಿ ಗೀತಾನಂದ ಫೌಂಡೇಶನ್ ಸಮಾಜಿಕ ,ಧಾರ್ಮಿಕ,ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಕಳೆದ ಸಂವತ್ಸರದಲ್ಲಿ 1ಕೋಟಿಯ 60ಲಕ್ಷ ರೂ ವಿನಿಯೋಗಿಸಿದೆ ಮುಂದಿನ ದಿನಗಳಲ್ಲಿ ಟ್ರಸ್ಟ್ ಸಾಮಾಜಿಕ ಬದ್ಧತೆಯನ್ನು ಕಾಯ್ದುಕೊಳ್ಳಲಿದೆ ಎಂದರು.
ಮಾಜಿ ಸಂಸದರಿAದ ಪರಿಸರಜಾಗೃತಿ ಪಾಠ
ಶಾಲಾ ಆರಂಭದ ದಿನದ ಹಿನ್ನಲ್ಲೆಯಲ್ಲಿ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹಾಗೂ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಕ್ಕಳಿಗೆ ಪರಿಸರ ಜಾಗೃತಿ ಪಾಠ ಮಾಡಿದರು.ಆನಂದ್ ಸಿ ಕುಂದರ್ ನೀಡಿದ ಚಾಕೊಲೆಟ್ ನ ಪ್ಲಾಸ್ಟಿಕ್ ನ್ನು ಎಸೆಯದಂತೆ ಮಾಹಿತಿ ನೀಡಿದನ್ನು ಸಂಸದರು ವೇದಿಕೆಯಲ್ಲಿ ಪ್ರಸ್ತಾಪಿಸಿ ಶಾಲಾ ಪಠ್ಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಪರಿಸರ ಜಾಗೃತಿ ವಿಚಾರವನ್ನು ಅಳವಡಿಸಲು ಸಲಹೆ ನೀಡಿದರು.
ಇದೇ ವೇಳೆ ಗೀತಾನಂದ ಫೌಂಡೇಶನ್ ವತಿಯಿಂದ ನಿರ್ಮಾಣಗೊಂಡ ಶಾಲಾ ಹೊಸ ಕಟ್ಟಡವನ್ನು ಅತಿಥಿಗಳು ಲೋಕಾರ್ಪಣೆಗೊಳಿಸಿದರು.
ಸ್ಥಳೀಯ 48 ಶಾಲೆಗಳ 6000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ ಹಸ್ತಾಂತರ, ಸಮವಸ್ತç ವಿತರಣೆ, ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಂಯುಕ್ತ ಪ್ರೌಢಶಾಲೆಯ ಪ್ರಾಥಮಿಕ ವಿಭಾಗಕ್ಕೆ ಸ್ಯಾನಿಟರಿ ನ್ಯಾಪ್ಕಿನ್ ಬರ್ನರ್ ಹಸ್ತಾಂತರ,ವಿವಿಧ ಸಂಘಸAಸ್ಥೆಗಳಿಗೆ ಸಸಿ ವಿತರಣೆ( ಪಂಚವರ್ಣ ಸಂಘಟನೆಗೆ ಸಾಂಕೇತಿಕ), ಕೋಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ಪರಿಕರ ಸೌಲಭ್ಯ ಹಸ್ತಾಂತರ,ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ,ಕಳೆದ ಸಾಲಿನ ಪಿಯು ಕಾಲೇಜು ನಿರ್ವಹಣೆಗೆ 5ಲಕ್ಷ ಮಿಕ್ಕಿ ದೇಣಿಗೆ ಸಹಿತ ವಿದ್ಯಾರ್ಥಿಗಳಿಗೆ ಸಮವಸ್ತ,ಗ್ರಾಮದಲ್ಲಿರುವ ಅಶಕ್ತ, ಅನಾರೋಗ್ಯ ಪೀಡತರಿಗೆ ಆರ್ಥಿಕ ನೆರವು ,ಬಡವರಿಗೆ ಸೂರು ಭಾಗ್ಯ,ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ನಗದು ಸಹಿತ ಪ್ರತಿಭಾ ಗೌವರ ಪುರಸ್ಕಾರ,ಪವರ್ ಲಿಫ್ಟಿಂಗ್ನಲ್ಲಿ ಸಾಧನೆಗೈದ ಶಾಲಾ ಶಿಕ್ಷಕಿ ನಾಗರತ್ನ, ಇಲಾಖೆಯಿಂದ ನಿವೃತ್ತರಾಗಲಿರುವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣಪತಿ ಕೆ. ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಲಿ,ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಜುಂ,ಉದ್ಯಮಿ ಮಲ್ಪೆ ಆನಂದ್ ಸುವರ್ಣ, ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್,ಕೋಟ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಪಡುಕರೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಜಿ,ಸAಯುಕ್ರ ಪ್ರೌಢಶಾಲಾ ಮುಖ್ಯ ಶಿಕ್ಷಕ ವಿವೇಕಾನಂದ ಗಾವ್ಕಂರ್,ಮನೋವೈದ್ಯ ಡಾ.ಪ್ರಕಾಶ್ ಸಿ ತೋಳಾರ್,ವಾಹಿನಿ ಯುವಕ ಮಂಡಲದ ಅಧ್ಯಕ್ಷ ರಮೇಶ್ ಹೆಚ್ ಕುಂದರ್,ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಂಜುನಾಥ ಹೊಳ್ಳ , ಗೀತಾನಂದ ಟ್ರಸ್ಟ್ನಿರ್ದೇಶಕಿ ದಿವ್ಯಲಕ್ಷಿ÷್ಮÃ ಪ್ರಶಾಂತ್ ಕುಂದರ್,ಶಾಲಾ ಎಸ್ ಡಿಎಂಸಿ ಅಧ್ಯಕ್ಷರುಗಳಾದ ಪ್ರಾಥಮಿಕ ನಾಗರಾಜ್ ,ಪ್ರೌಢಶಾಲಾ ವಿಭಾಗದ ರಾಘವೇಂದ್ರ ಕಾಂಚನ್,ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೆ ಕೃಷ್ಣ ಕಾಂಚನ್,ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಕೋಡಿ,ಕೋಟ ಘಟಕದ ಅಧ್ಯಕ್ಷ ರಂಜಿತ್ ಕುಮಾರ್,ಕೋಟ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಾಧವ ಪೈ, ಮೊದಲಾದವರು ಉಪಸ್ಥಿತರಿರುವರು.ಕಾರ್ಯಕ್ರಮವನ್ನು ಜನತಾ ಸಂಸ್ಥೆಯ ಸಿಬ್ಬಂದಿ ಮಮತಾ ಗುಳ್ಳಾಡಿ ನಿರೂಪಿದರೆ,ಜನತಾ ಸಂಸ್ಥೆಯ ಮ್ಯಾನೇಜರ್ ಶ್ರೀನಿವಾಸ ಕುಂದರ್ ಸ್ವಾಗತಿಸಿದರು.ಗೀತಾನಂದ ಸಮಾಜಕಾರ್ಯವಿಭಾಗದ ರವಿಕಿರಣ್ ಕೋಟ ವಂದಿಸಿದರು.
ಪರಿಸರಸ್ನೇಹಿ ಕಾರ್ಯಕ್ರಮ ಆನಂದೋತ್ಸವದಲ್ಲಿ ವಿಶೇಷವಾಗಿ ಪ್ಲಾಸ್ಟಿಕ್ ಮುಕ್ತ ಪರಿಸರ ಜಾಗೃತಿ ಸಂದೇಶ ನೀಡುವ ಬಟ್ಟೆ ಕೈಚೀಲ,ಸ್ಟೀಲ್ ಬಾಟಲಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ,ಸ್ಮರಣಿಕೆಯನ್ನು ಗಿಡ ನೀಡುವ ಮೂಲಕ ಅರ್ಥಪೂರ್ಣವಾಗಿಸಿತು.
ಮಣೂರು ಪಡುಕರೆ ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಪ್ರಾಥಮಿಕ ಶಾಲಾ ಕೆ.ಸಿ ಕುಂದರ್ ಸಭಾಭವನದಲ್ಲಿ ಗೀತಾನಂದ ಫೌಂಡೇಶನ್ ವತಿಯಿಂದ ಆನಂದೋತ್ಸವ ಕಾರ್ಯಕ್ರವನ್ನು ಡಾ.ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಮುಖ್ಯಸ್ಥ ನಾಡೋಜ ಡಾ.ಜಿ ಶಂಕರ್ ಉದ್ಘಾಟಿಸಿದರು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಲಿ,ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಜುಂ,ಉದ್ಯಮಿ ಮಲ್ಪೆ ಆನಂದ್ ಸುವರ್ಣ ಇದ್ದರು.
Leave a Reply