News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಅಮೃತೇಶ್ವರೀ ಮೇಳದ ಕಲಾವಿದರಿಗೆ ವಿಮಾ ಸೌಲಭ್ಯ

ಕೋಟ: ಇಲ್ಲಿನ ಕೋಟದ ಅಮೃತೇಶ್ವರೀ ದೇಗುಲದ ಆಡಳಿತ ವತಿಯಿಂದ ನಡೆಸಲ್ಪಡುವ ಅಮೃತೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಶುಕ್ರವಾರ ಕೊನೆಯ ತಿರುಗಾಟದ ಸೇವೆಯಾಟವನ್ನು ಶ್ರೀದೇಗುಲದಲ್ಲಿ ಪೂರೈಸಿಕೊಂಡಿತು.

ಈ ಹಿನ್ನಲ್ಲೆಯಲ್ಲಿ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ತಮ್ಮ ಮೇಳದ ಕಲಾವಿದರಿಗೆ ವಿಮಾ ಸೌಲಭ್ಯವನ್ನು ಕಾಡ್9ನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಂ.ಶಿವ ಪೂಜಾರಿ,ಗಣೇಶ್ ನೆಲ್ಲಿಬೆಟ್ಟು, ಚಂದ್ರ ಆಚಾರ್, ಮೇಳದ ವ್ಯವಸ್ಥಾಪಕ ಕೋಟ ಸುರೇಶ್,ಭಾಗವತರಾದ ಹಾಲಾಡಿ ರಾಘವೇಂದ್ರ ಮಯ್ಯ ,ಹಿರಿಯ ಕಲಾವಿದ ಜಗದೀಶ ಹೆಗಡೆ,ಮಾಧವ ನಾಗೂರು,ದೇಗುಲದ ವ್ಯವಸ್ಥಾಪಕ  ಗಣೇಶ್ ಹೊಳ್ಳ ಇದ್ದರು.

ಕೋಟ ಅಮೃತೇಶ್ವರೀ ಮೇಳದ ಕಲಾವಿದರಿಗೆ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ವಿಮಾ  ಸೌಲಭ್ಯದ ಕಾಡ್9ನ್ನು ಬಿಡುಗಡೆಗೊಳಿಸಿ ಹಸ್ತಾಂತರಿಸಿದರು. ್ಲ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಂ.ಶಿವ ಪೂಜಾರಿ,ಗಣೇಶ್ ನೆಲ್ಲಿಬೆಟ್ಟು, ಚಂದ್ರ ಆಚಾರ್, ಮೇಳದ ವ್ಯವಸ್ಥಾಪಕ ಕೋಟ ಸುರೇಶ್ ಇದ್ದರು.

Leave a Reply

Your email address will not be published. Required fields are marked *