
ಕೊಲ್ಲೂರು : ವ್ಯಕ್ತಿಯೊಬ್ಬರಿಗೆ ಪರಿಚಯದ ಮೂವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.ಪೊಲೀಸರು ಈ ಘಟನೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕಾರ್ತಿಕ್ ಆಚಾರಿ, ವಿಷ್ಣು ಶೆಟ್ಟಿ, ಪ್ರದೀಪ್ ಪೂಜಾರಿ ಎಂದು ಗುರುತಿಸಲಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣ ವಿವರ: ದಿನಾಂಕ 02/06/2025 ರಂದು ರಾತ್ರಿ ರಾತ್ರಿ ಸುಮಾರು 9:30 ಗಂಟೆಗೆ ಪಿರ್ಯಾದಿದಾರರಾದ ಸುಧೀರ್ ರವರು ಕೆಲಸ ಮುಗಿಸಿಕೊಂಡು ಇಡೂರು ಕುಂಜ್ಞಾಡಿ ಗ್ರಾಮದ ಬಸ್ ಸ್ಟಾಪ್ನಲ್ಲಿ ಬಸ್ಸಿಂದ ಇಳಿದು ನಡೆದುಕೊಂಡು ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದ ಪಿರ್ಯಾದಿದಾರರ ಪರಿಚಯದ ಆಪಾದಿತರಾದ ಕಾರ್ತಿಕ್ , ವಿಷ್ಣು ಹಾಗೂ ರಕ್ಷಿತ್ ರವರು ಪಿರ್ಯಾದಿದಾರರನ್ನು ಉದ್ಧೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಕೆನ್ನೆಗೆ ಹೊಡೆದಿರುತ್ತಾರೆ. ಕಾರ್ತಿಕನು ಪಿರ್ಯಾದಿದಾರರ ಕುತ್ತಿಗೆಯನ್ನು ಒತ್ತಿ ಹಿಡಿದು ಕೊಲ್ಲಲು ಪ್ರಯತ್ನಿಸಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 44/2025 ಕಲಂ: ಕಲಂ: 3(1)(r)(s), 3(2)(v), 3(2)(va) SCc/ST act 2015, 352, 115(2), 109, 351(2) R/W 3(5) BNS ನಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಮೇಲಿನ ಎರಡು ಪ್ರಕರಣಗಳಲ್ಲೂ ಆರೋಪಿತರಾದ 1) ಕಾರ್ತಿಕ್ ಆಚಾರಿ(24), ತಂದೆ : ವೆಂಕಟರಮಣ ಆಚಾರ್, ಇಡೂರು-ಕುಂಜ್ಞಾಡಿ ಗ್ರಾಮ, ಕುಂದಾಪುರ. 2) ವಿಷ್ಣು ಶೆಟ್ಟಿ(26) ತಂದೆ : ರವಿ ಶೆಟ್ಟಿ, ಇಡೂರು-ಕುಂಜ್ಞಾಡಿ ಗ್ರಾಮ,ಕುಂದಾಪುರ ಹಾಗೂ ಗಂಗೊಳ್ಳಿ ಪೊಲೀಸ್ ಠಾಣಾ ಪ್ರಕರದಲ್ಲಿ ಪ್ರದೀಪ ಪೂಜಾರಿ(28), ತಂದೆ: ಉದಯ ಪೂಜಾರಿ, ಆಲೂರು ಗ್ರಾಮ, ಕುಂದಾಪುರ ಇವರುಗಳನ್ನು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Leave a Reply