Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ : ವಕೀಲರ ಸಂಘದ ವಾರ್ಷಿಕ ಸಭೆಯಲ್ಲಿ ಮಾಜಿ ಅಧ್ಯಕ್ಷರ ಪ್ರಶ್ನೆಗಳಿಗೆ ಉತ್ತರಿಸದೆ ಕಾಲ್ಕಿತ್ತ ಹಾಲಿ ಅಧ್ಯಕ್ಷ

ಉಡುಪಿ ವಕೀಲರ ಸಂಘದ ವಾರ್ಷಿಕ ಸಭೆಯೂ ಶುಕ್ರವಾರ ಮಧ್ಯಾಹ್ನ ಉಡುಪಿ ಜಿಲ್ಲಾ ನ್ಯಾಯಾಲಯ ವಕೀಲರ ಸಂಘದಲ್ಲಿ ಜರುಗಿತು.

ಈ ಸಭೆಯಲ್ಲಿ ಮಾಜಿ ಅಧ್ಯಕ್ಷ ಟಿ.ವಿಜಯ್ ಕುಮಾರ್ ಶೆಟ್ಟಿಯವರ ಪ್ರಶ್ನೆಗಳಿಗೆ ಉತ್ತರಿಸದೇ ಹಾಲಿ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಅವರು ಓಡಿಹೋದ ಘಟನೆ ನಡೆಯಿತು.

ಸಭೆಯೂ ಮುಕ್ತಾಯಗೊಳ್ಳುವ ಮೊದಲೇ, ಲೆಕ್ಕಪತ್ರಗಳನ್ನು ಅನುಮೋದನೆ ಮಾಡದೇ, ಸದಸ್ಯರ ಪ್ರಶ್ನೆಗಳನ್ನು ಆಲಿಸದೇ ಸಭೆಯಿಂದ ಹೊರನಡೆದಿದ್ದಾರೆ.

ಅಲ್ಲದೇ ಸಭಾ ಕಾರ್ಯಕ್ರಮದಲ್ಲಿ ಧನ್ಯವಾದವನ್ನು ಕೊಡದಿರುವ ಬಗ್ಗೆ ಉಡುಪಿ ವಕೀಲರ ಸಂಘದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *