Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಡಿತಲೆಯಲ್ಲಿ ಎರಡನೇ ವರ್ಷದ ಹಸಿರು ಜೀವ ಅಭಿಯಾನ

ಕೋಟ: ಕೋಡಿಕನ್ಯಾನ  ಗ್ರಾಮ ಪಂಚಾಯತ್ ನೇತ್ರತ್ವದಲ್ಲಿ, ಗೀತಾನಂದ ಫೌಂಡೇಶನ್ ಮಣೂರು ಹಾಗೂ ಪಂಚವರ್ಣ ಸಂಘಟನೆ ಕೋಟ ಇವರ ಸಂಯೋಜನೆಯೊAದಿಗೆ,  ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ , ಪಂಚಶಕ್ತಿ ಸಂಘ ಕೋಡಿತಲೆ ಇವರ ಸಹಕಾರದೊಂದಿಗೆ ಮೂರು ತಿಂಗಳ  ಪರಿಸರಸ್ನೇಹಿ ಹಸಿರು ಜೀವ 2ನೇ ವರ್ಷದ ಕೊನೆಯ ಭಾನುವಾರದ ಅಭಿಯಾನವನ್ನು ಕೋಡಿಕನ್ಯಾನ ಗ್ರಾಮಪಂಚಾಯತ್‌ನ ಅಧ್ಯಕ್ಷೆ ಗೀತಾ ಖಾರ್ವಿ  ಕೋಡಿತಲೆ  ಭಾಗದಲ್ಲಿ ಮನೆಯಿಂದ ಮನೆಗೊಂದು ಗಿಡ  ನೀಡುವುದರ  ಮೂಲಕ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣ ಪೂಜಾರಿ ಗಿಡ ನಡುವ ಕಾರ್ಯಕ್ರಮ ಮಾಡುವದರಿಂದ ಆಗುವ ಅನುಕೂಲತೆಗಳ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಪಂಚಾಯತ್‌ನ ನಿಕಟ ಪೂರ್ವ ಅಧ್ಯಕ್ಷ ಪ್ರಭಾಕರ್ ಮೆಂಡನ್, ಪಂಚಶಕ್ತಿ ಸಂಘದ ಕಾರ್ಯದರ್ಶಿ ಸಂದೀಪ ಖಾರ್ವಿ, ಸದಸ್ಯರಾದ ಅನಿಲ್ ಖಾರ್ವಿ , ವಿಕೇಶ್ ಬಂಗೇರ  ಸಂಜೀವಿನಿ ಸಂಘದ  ಎಲ್.ಸಿ.ಆರ್.ಪಿ. ಆಶಾದೇವಿ, ಪಶುಸಖಿ ಮಾಲತಿ ,  ಸ್ಥಳೀಯರಾದ  ಪ್ರೀತ, ಜ್ಯೋತಿ , ಭರತ್ ಖಾರ್ವಿ, ಕುಮಾರಿ ಸುಚಿತ್ರ ಹಾಗೂ ಪುಟಾಣಿಗಳು  ಉಪಸ್ಥಿತರಿದ್ದರು. ಪಂಚಶಕ್ತಿ ಸಂಘದ   ಗೌರವಾಧ್ಯಕ್ಷ ಮಡಿ ವಿಶ್ವನಾಥ ಖಾರ್ವಿ ವಂದಿಸಿದರು. ,ಕೋಡಿತಲೆ ಅಂಗನವಾಡಿ ಕಾರ್ಯಕರ್ತೆ ಕುಮಾರಿ ನಿರೋಶ ಕಾರ್ಯಕ್ರಮ ನಿರ್ವಹಿಸಿದರು.

ಕೋಡಿಕನ್ಯಾನ  ಗ್ರಾಮ ಪಂಚಾಯತ್ ನೇತ್ರತ್ವದಲ್ಲಿ, ಗೀತಾನಂದ ಫೌಂಡೇಶನ್ ಮಣೂರು ಹಾಗೂ ಪಂಚವರ್ಣ ಸಂಘಟನೆ ಕೋಟ ಇವರ ಸಂಯೋಜನೆಯೊAದಿಗೆ ಕೋಡಿ ತಲೆಯಲ್ಲಿ ನಡೆದ ಹಸಿರುಜೀವ ಕಾರ್ಯಕ್ರಮಕ್ಕೆ ಕೋಡಿಕನ್ಯಾನ ಗ್ರಾಮಪಂಚಾಯತ್‌ನ ಅಧ್ಯಕ್ಷೆ ಗೀತಾ ಖಾರ್ವಿ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣ ಪೂಜಾರಿ, ಪಂಚಾಯತ್‌ನ ನಿಕಟ ಪೂರ್ವ ಅಧ್ಯಕ್ಷ ಪ್ರಭಾಕರ್ ಮೆಂಡನ್, ಪಂಚಶಕ್ತಿ ಸಂಘದ ಕಾರ್ಯದರ್ಶಿ ಸಂದೀಪ ಖಾರ್ವಿ ಇದ್ದರು.

Leave a Reply

Your email address will not be published. Required fields are marked *