Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನಾಡೋಜ ಡಾ ಜಿ. ಶಂಕರ್ ರವರ 70 ನೇ ಜನ್ಮ ದಿನದ ಪ್ರಯುಕ್ತ ಬಾರ್ಕೂರಿನ ನ್ಯಾಷನಲ್ ಕಾಲೇಜ್’ನಲ್ಲಿ ರಕ್ತದಾನ ಶಿಬಿರ

ಮೊಗವೀರ ಯುವ  ಸಂಘಟನೆ (ರಿ.) ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ WE 13 ಗೆಳೆಯರ ಬಳಗ ಮತ್ತು ಸ್ಪೂರ್ತಿ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರಕ್ತನಿಧಿ ಕೆ.ಎಂ.ಸಿ ಮಣಿಪಾಲ ಮತ್ತು ಜಿಲ್ಲಾಡಳಿತ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ರಕ್ತದಾನದ ಕ್ರಾಂತಿಪುರುಷ ನಾಡೋಜ ಡಾ ಜಿ. ಶಂಕರ್ ರವರ 70 ನೇ ಜನ್ಮ ದಿನದ ಪ್ರಯುಕ್ತ ಬಾರ್ಕೂರಿನ ನ್ಯಾಷನಲ್ ಕಾಲೇಜ್’ನಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ದಾಖಲೆಯ 50’ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ಹಿರಿಯ ರಕ್ತದಾನಿ ಬಾರ್ಕೂರು ಹನೆಹಳ್ಳಿ ಜಯಕರ್ ಪೂಜಾರಿಯವರನ್ನು ಹಾಗೂ 32’ಬಾರಿ ರಕ್ತದಾನ ಮಾಡಿದ ಮಹಿಳಾ ರಕ್ತದಾನಿ ಲಕ್ಷ್ಮೀ ಕೋಟೇಶ್ವರ ಅವರನ್ನು ಮೊಗವೀರ ಯುವ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಜಯಂತ್ ಅಮೀನ್ ಕೋಡಿ ಮತ್ತು  WE-13 ಗೆಳೆಯರ ಬಳಗದ ಮುಖ್ಯ ಸಂಚಾಲಕರಾದ ಅಶೋಕ್ ಎಲ್. ಮಂದಾರ್ತಿ ಅವರ ನೇತ್ರತ್ವದಲ್ಲಿ ಸನ್ಮಾನಿಸಿ ಗೌರವಿಲಾಯಿತು.

ಈ ಸಂದರ್ಭದಲ್ಲಿ ರಕ್ತನಿಧಿ ಕೆಎಂಸಿ-ಯ ಮೇಲ್ವಿಚಾರಕ ವಿಶ್ವೇಶ್ ಭಟ್, ಮೊಗವೀರ ಯುವ ಸಂಘಟನೆಯ ನಿಕಟಪೂರ್ವ ಅಧ್ಯಕ್ಷರಾದ ರಾಜೇಂದ್ರ ಸುವರ್ಣ, ಉಪಾಧ್ಯಕ್ಷರಾದ ಅಶೋಕ್ ತೆಕ್ಕಟ್ಟೆ, ರವೀಶ್ ಎಸ್. ಕೊರವಡಿ, ಸಂಘಟನಾ ಕಾರ್ಯದರ್ಶಿ ಗುಲಾಬಿ ದೇವದಾಸ್ ಬಂಗೇರಾ, ಮಂದಾರ್ತಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಭಾರತಿ ನೈಲಾಡಿ, ಕೋಟೇಶ್ವರ ಘಟಕದ ಅಧ್ಯಕ್ಷರಾದ ರಾಘವೇಂದ್ರ ಹರಪ್ಪನೆಕೆರೆ, WE-13 ಗೆಳೆಯರ ಬಳಗದ ಸುರೇಶ್ ಕಾಂಚನ್ ಬಾರಿಕೆರೆ ದೇವದಾಸ್ ಹೊಸ್ಕೆರೆ, ರಾಜು ಮರಕಾಲ ಶಿರಿಯಾರ ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *