Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಜನತಾ ಸಂಸ್ಥೆಯಲ್ಲಿ ದೀಪಾವಳಿ ಸಡಗರ, ಸಾಂಸ್ಕೃತಿಕ  ಕಾರ್ಯಕ್ರಮ

ಕೋಟ:  ಜನತಾ ಫಿಶ್ ಮೀಲ್ ಕೋಟ- ಪಡುಕರೆಯಲ್ಲಿ  ದೀಪಾವಳಿಯ ಪ್ರಯುಕ್ತ  ಹಬ್ಬ -2025 ಸಾಂಸ್ಕೃತಿಕ  ಕಾರ್ಯಕ್ರಮ ಜರಗಿತು. ಸಂಸ್ಥೆಯ ಮುಖ್ಯಸ್ಥ ಆನಂದ ಸಿ.ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜನತಾ ಸಂಸ್ಥೆ ಒಂದು ಕುಟುಂಬವಿದ್ದoತೆ ಹೀಗಾಗಿ ಹಬ್ಬಹರಿದಿನಗಳಂದು ನಾವೆಲ್ಲ ಒಟ್ಟಾಗಿ ಬೆರೆತು ಸಂಭ್ರಮಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂ ಎಲ್ಲರಿಗೂ ಶುಭ ಕೋರಿದರು.

ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಶಾಂತ್ ಎ ಕುಂದರ್ , ರಕ್ಷಿತ್ ಎ. ಕುಂದರ್, ಗೀತಾ ಆನಂದ ಸಿ ಕುಂದರ್ , ದಿವ್ಯ ಲಕ್ಷ್ಮಿ  ಪ್ರಶಾಂತ್ ಕುಂದರ್ , ವೈಷ್ಣವಿ ರಕ್ಷಿತ್ ಕುಂದರ್ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಅಣ್ಣಪ್ಪ ಶ್ರೀಯಾನ್ , ಆನಂದ ಪಿ.ಸುವರ್ಣ  ಜನತಾ ಸದಸ್ಯರು ಭಾಗಿಯಾದರು.

ಸಭಾ ಕಾರ್ಯಕ್ರಮದ ನಂತರ ಚಾರ್ವಿ ಕುಂದರ್ ,ಧನ್ಯತಾ ಕುಂದರ್ ಮತ್ತು ಅಕ್ಷರ ಕುಂದರ್ ಇವರಿಂದ ಯಕ್ಷಗಾನ ಕಾರ್ಯಕ್ರಮ ಮತ್ತು ಸಂಸ್ಥೆಯ ಸಿಬಂದಿಗಳಿoದ ಬಲಿಂದ್ರ ಪೂಜೆ , ನೃತ್ಯ , ಕುಣಿತ ಭಜನೆ, ಸಾಮಾಜಿಕ ನಾಟಕ ಮತ್ತು ನರಕಾಸುರ ವಧೆ ಎಂಬ ಪೌರಾಣಿಕ ನಾಟಕ ನಡೆಯಿತು. ಕಾರ್ಯಕ್ರಮವನ್ನು  ಸಂಸ್ಥೆಯ ಸಿಬ್ಬಂದಿಗಳಾದ ರೇಷ್ಮಾ ಜೋಗಿ ನಿರೂಪಿಸಿ,ಸುಪ್ರೀತ ಶರತ್ ವಂದಿಸಿದರು.

ಜನತಾ ಫಿಶ್ ಮೀಲ್ ಕೋಟ- ಪಡುಕರೆಯಲ್ಲಿ  ದೀಪಾವಳಿಯ ಪ್ರಯುಕ್ತ  ಹಬ್ಬ -2025 ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಸ್ಥೆಯ ಮುಖ್ಯಸ್ಥ ಆನಂದ ಸಿ.ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಶಾಂತ್ ಎ ಕುಂದರ್ , ರಕ್ಷಿತ್ ಎ. ಕುಂದರ್, ಗೀತಾ ಆನಂದ ಸಿ ಕುಂದರ್, ದಿವ್ಯ ಲಕ್ಷ್ಮಿ ಪ್ರಶಾಂತ್ ಕುಂದರ್ ,ವೈಷ್ಣವಿ ರಕ್ಷಿತ್ ಕುಂದರ್ ಇದ್ದರು.

Leave a Reply

Your email address will not be published. Required fields are marked *