
ಬ್ರಹ್ಮಾವರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬ್ರಹ್ಮಾವರ ತಾಲೂಕು ಶಾಖೆಯ ಮಹಾಸಭೆಯು ತಾರೀಕು 16-10-2025 ರಂದು ಶ್ರೀಯುತ ಶ್ರೀಕಾಂತ್ ಎಸ್. ಹೆಗ್ಡೆ , ತಹಸಿಲ್ದಾರ್,ಬ್ರಹ್ಮಾವರ ಇವರ ಅನಪಸ್ಥಿತಿಯಲ್ಲಿ ಉಪ ತಹಸಿಲ್ದಾರರಾದ ಶ್ರೀಯುತ ಚಂದ್ರಹಾಸ ಬಂಗೇರ ಅವರ ಅಧ್ಯಕ್ಷತೆಯಲ್ಲಿ ಬ್ರಹ್ಮಾವರದ ಹಿರಿಯ ನಾಗರಿಕರ ಸಂಘದ ಸಭಾಂಗಣದಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯದ IRCS ನ ಸಭಾಪತಿಗಳಾದ ಬಸ್ರೂರು ರಾಜೀವ್ ಶೆಟ್ಟಿ ಮತ್ತು IRCS, ಕುಂದಾಪುರ ಇದರ ಸಭಾಪತಿಗಳಾದ ಶ್ರೀಯುತ ಜಯಕರ ಶೆಟ್ಟಿ ಹಾಗೂ ಖಜಾಂಚಿಗಳಾದ ಶ್ರೀಯುತ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ಶ್ರೀಯುತ ಹರಿoನಾಥ್ ಶೆಟ್ಟಿ ಗೈದರು. IRCS, ಬ್ರಹ್ಮಾವರ ಶಾಖೆಯ ಸಭಾಪತಿಗಳಾದ ಶ್ರೀಯುತ ರಾಜಾರಾಮ್ ಶೆಟ್ಟಿಯವರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಶ್ರೀಯುತ ಗಣೇಶ್ ಉಪಾಧ್ಯಾಯರು ವರದಿಯನ್ನು ವಾಚಿಸಿದರು. ಲೆಕ್ಕಪತ್ರವನ್ನು ಶ್ರೀಯುತ ಉದಯ್ ಕುಮಾರ್ ಶೆಟ್ಟಿ ಅವರು ಸಭೆಯಲ್ಲಿ ಮಂಡಿಸಿದರು.
ಚುನಾವಣಾಧಿಕಾರಿಗಳಾದ ಶ್ರೀಯುತ ಹರಿಂದ್ರನಾಥ್ ಶೆಟ್ಟಿ ಯವರು 2025 ರಿಂದ 2028 ರವರೆಗೆ ಹೆಸರನ್ನು ನೀಡಿದ ಹತ್ತು ಜನರ ಕಾರ್ಯಕಾರಿ ಸಮಿತಿಯ ಸದಸ್ಯರ ಪಟ್ಟಿಯನ್ನು ಓದಿ ಎಲ್ಲರಿಂದಲೂ ಅನುಮೋದನೆ ಪಡೆದುಕೊಳ್ಳಲಾಯಿತು. ಲೆಕ್ಕಪರಿಶೋಧಕರಾಗಿ ಸಿ ಎ ಪದ್ಮನಾಭ ಕಾಂಚನ್ ರವರನ್ನು ಆಯ್ಕೆ ಮಾಡಲಾಯಿತು. ಬ್ರಹ್ಮಾವರ ತಾಲೂಕಿನ ಉಪ ತಹಸೀಲ್ದಾರಾದ ಶ್ರೀಯುತ ಚಂದ್ರಹಾಸ ಬಂಗೇರರವರು ಅಧ್ಯಕ್ಷೀಯ ಮಾತುಗಳ ನಾಡುತ್ತ IRCS,ಬ್ರಹ್ಮಾವರ ಶಾಖೆಯ ಎಲ್ಲಾ ಕಾರ್ಯಚಟುವಟಿಕೆಗಳಿಗೆ ತಮ್ಮ ಪೂರ್ಣ ಸಹಕಾರವನ್ನು ನೀಡುವುದಾಗಿ ಆಶ್ವಾಸನೆ ನೀಡಿದರು.
Major. ಜಿ ಬಾಲಕೃಷ್ಣ ಶೆಟ್ಟಿಯವರು ವಂದನಾರ್ಪಣೆ ನೀಡಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ತದನಂತರ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ IRCS, ಬ್ರಹ್ಮಾವರ ಶಾಖೆಗೆ ಈ ಕೆಳಗಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು:-
1. ಅಧ್ಯಕ್ಷರು: ಶ್ರೀ ಶ್ರೀಕಾಂತ್ ಎಸ್. ಹೆಗ್ಡೆ,ತಹಸಿಲ್ದಾರರು ಬ್ರಹ್ಮಾವರ ತಾಲೂಕು
2. ಸಭಾಪತಿ:ಶ್ರೀ ಉದಯ್ ಕುಮಾರ್ ಶೆಟ್ಟಿ
3. ಉಪ ಸಭಾಪತಿ: ಶ್ರೀ ರಾಜಾರಾಮ್ ಶೆಟ್ಟಿ
4. ಕಾರ್ಯದರ್ಶಿ:ಮೇಜರ್ ಜಿ ಬಾಲಕೃಷ್ಣ ಶೆಟ್ಟಿ
5. ಖಜಾಂಜಿ: ಶ್ರೀ ಭಾಸ್ಕರ್ ಎಂ ಶೆಟ್ಟಿ
6. ಕಾರ್ಯಕಾರಿ ಸಮಿತಿಯ ಇತರ ಸದಸ್ಯರು:
ಶ್ರೀ ಎ ಬಾಲಕೃಷ್ಣ ಶೆಟ್ಟಿ, ಶ್ರೀ ಭಾಸ್ಕರ್ ಶೆಟ್ಟಿ , ಚಾಂತಾರು
ಶ್ರೀ ಕೆ ಜಯರಾಮ ಶೆಟ್ಟಿ, ಡಾ| ಮಹೇಶ್ ಐತಾಳ್, ಶ್ರೀ ವರದಾನಂದ ಶೆಟ್ಟಿ, ಶ್ರೀ ಸಂಕಯ್ಯ ಶೆಟ್ಟಿ ಕಾರ್ಯಕಾರಿ ಸಮಿತಿಗೆ Co- opt ಮಾಡಲಾದ ಇತರ ಸದಸ್ಯರು:- ಶ್ರೀ ರಾಘವೇಂದ್ರ ಸಾಮಗ, ಶ್ರೀ ಹರಿಂದ್ರನಾಥ್ ಶೆಟ್ಟಿ, ಶ್ರೀ ದಿನೇಶ್ ನಾಯರಿ.
Leave a Reply