Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರತನ್ ಸಾಂಚಿ ಕುಂದಾಪುರ ತಂಡಕ್ಕೆ ವಿ.ವೈ.ಎಂ ಟ್ರೋಫಿ

ವಿಶ್ವಕರ್ಮ ಯುವ ಮಿಲನ್ (ರಿ.)ಕರ್ನಾಟಕ ರಾಜ್ಯ ಇದರ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ವಿ .ವೈ.ಎಂ ಪ್ರೀಮಿಯರ್ ಲೀಗ್ ಸೀಸನ್ 2 ನವೆಂಬರ್  30 ಆದಿತ್ಯವಾರದಂದು ಮಂಗಳೂರಿನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ನಡೆಯಿತು.

ವಿಶ್ವಕರ್ಮ ಸಮುದಾಯದ ರಾಜ್ಯ ಮಟ್ಟದ ಆಟಗಾರರನ್ನೊಳಗೊಂಡ ಒಟ್ಟು 8 ತಂಡಗಳ ಲೀಗ್ ಮಾದರಿಯ ಪಂದ್ಯಾಟದಲ್ಲಿ ಸುಬ್ರಮಣ್ಯ ಆಚಾರ್ಯ ಸಾರಥ್ಯದ ವಿ .ವೈ.ಎಂ ರತನ್ ಸಾಂಚಿ ಕುಂದಾಪುರ ವಿಜೇತ ತಂಡವಾಗಿ ಹಾಗೂ ಪ್ರದೀಪ್ ಆಚಾರ್ಯ ಸಾರಥ್ಯದ ವಿ .ವೈ.ಎಂ ಕಶ್ಯಾರ್ಪ್ ವಾರಿಯರ್ಸ್ ಮಂಗಳೂರು ರನ್ನರ್ ಅಪ್ ತಂಡವಾಗಿ ಹೊರಹೊಮ್ಮಿತು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮನೋಜ್ ಆಚಾರ್ಯ ಶಂಕರನಾರಾಯಣ ಪಡೆದರು. ಪ್ರಥಮ ಪ್ರಶಸ್ತಿಯು 50,000 ನಗದು ಮತ್ತು ವಿ .ವೈ.ಎಂ ಟ್ರೋಫಿ ಹಾಗೂ ದ್ವಿತೀಯ 30,000 ನಗದು ಮತ್ತು ವಿ.ವೈ.ಎಂ ಟ್ರೋಫಿ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *