Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಪಂಚವರ್ಣ ಸಂಸ್ಥೆಯ 173ನೇ ಪರಿಸರಸ್ನೇಹಿ ಅಭಿಯಾನ
ವನಮಹೋತ್ಸವ ಅರ್ಥಪೂರ್ಣವಾಗಿ ಅನುಷ್ಠಾನಗೊಳ್ಳಲಿ – ಅರವಿಂದ ಶರ್ಮ

ಕೋಟ: ವನಮಹೋತ್ಸವಗಳು ಅರ್ಥಪೂರ್ಣವಾಗಿ ಅನುಷ್ಠಾನಗೊಳ್ಳಬೇಕು ಆ ಮೂಲಕ ಪರಿಸರ ಉಳಿಸುವ ಕಾಯಕ ಮಾಡಬೇಕು ಎಂದು ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಅಧ್ಯಕ್ಷ ಅರವಿಂದ ಶರ್ಮ ಹೇಳಿದರು.

ಭಾನುವಾರ ಪಾಂಡೇಶ್ವರ ಮಹಿಳಾ ಮಂಡಲದ ಕಛೇರಿಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತ್ರತ್ವದಲ್ಲಿ ಮಣೂರು ಫ್ರೆಂಡ್ಸ್,ಹಂದಟ್ಟು ಮಹಿಳಾ ಬಳಗ,ಗೆಳೆಯರ ಬಳಗ ಕಾರ್ಕಡ ,ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದೊಂದಿಗೆ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ, ಮಹಿಳಾ ಮಂಡಲ ಪಾಂಡೇಶ್ವರ ಸಾಸ್ತಾನ, ಸಂಜೀವಿನಿ ಒಕ್ಕೂಟ ಪಾಂಡೇಶ್ಚರ ಗ್ರಾ.ಪಂ ಇವರುಗಳ ಸಂಯೋಜನೆಯೊಂದಿಗೆ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಪರಿಸರ ಉಳಿದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ, ಈ ದಿಸೆಯಲ್ಲಿ ಪರಿಸರದ ಮೂಲೆ ಮೂಲೆಯಲ್ಲಿ ಗಿಡನಡುವ ಸಂಕಲ್ಪಅಭಿಯಾನ ನಡೆಯಬೇಕು, ಪರಿಸರವನ್ನು ಆಧುನಿಕತೆಯ ನೆಪದಲ್ಲಿ ಹಾಳು ಗೆಡುತ್ತಿದ್ದೇವೆ ವಾತಾವರಣ ಏರುಪೇರು ಅನುಭವಿಸುತ್ತಿದ್ದೇವೆ ಕಾಲಕಾಲಕ್ಕೆ ತಕ್ಕಂತೆ ಮಳೆ ಕ್ಷೀಣಿಸುತ್ತಿದೆ ಇದೇ ರೀತಿ ಮುಂದುವರಿದೆರೆ ಆಪತ್ತು ಕಟ್ಟಿಟ್ಟ ಬುತ್ತಿ ಈ ನಿಟ್ಟಿನಲ್ಲಿ ಇಂದೇ ಇದರ ಬಗ್ಗೆ ಕಾರ್ಯೋನ್ಮುಖವಾಗಬೇಕು ಎಂದು ಕರೆ ಇತ್ತರು.

ಈ ಸಂದರ್ಭದಲ್ಲಿ ಮಹಿಳಾ ಮಂಡಲ ಸಾಸ್ತಾನ ಅಧ್ಯಕ್ಷರಿಗೆ ಗಿಡ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು. ಮಹಿಳಾ ಮಂಡಲದ ವಠಾರದಲ್ಲಿ ಸಂಜೀವಿನಿ ಒಕ್ಕೂಟ ಪಾಂಡೇಶ್ವರ ಅಧ್ಯಕ್ಷೆ ಲೀಲಾವತಿ ಗಂಗಾಧರ ಗಿಡ ನಟ್ಟು ಪರಿಸರ ಜಾಗೃತಿ ಸಂದೇಶ ವಾಚಿಸಿದರು..

ಈ ವೇಳೆ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ, ರತ್ನಾ ಜೆ ರಾಜ್, ಪಾಂಡೇಶ್ವರ ಗ್ರಾ.ಪಂ ಅಧ್ಯಕ್ಷೆ ಕಲ್ಪನಾ ದಿನಕರ್, ಮಹಿಳಾ ಮಂಡಲ ಪಾಂಡೇಶ್ಚರ ಸಾಸ್ತಾನ ಅಧ್ಯಕ್ಷೆ ಸುಮಿತ್ರಾ ಸುಧಾಕರ್ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಕಾರ್ಯದರ್ಶಿ, ಕೃಷ್ಣ ಆಚಾರ್, ರೋಟರಿ ಕ್ಲಬ್‍ನ ಶ್ರೀಪತಿ ಅಧಿಕಾರಿ, ಅಶೋಕ್ , ಸಂಜೀವಿನಿ ಒಕ್ಕೂಟದ ಮಾಜಿ ಅಧ್ಯಕ್ಷೆ ಉಷಾ ಗಣೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷೆ ಸೀಮಾ ವಿಜಯ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಕಾರ್ಯದರ್ಶಿ ಸುಧೀಂದ್ರ ಜೋಗಿ, ಪಂಚವರ್ಣ ಮಹಿಳಾ ಮಂಡದ ಉಪಾಧ್ಯಕ್ಷೆ ವಸಂತಿ ಹಂದಟ್ಟು ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ನಿರೂಪಿಸಿ ವಂದಿಸಿದರು. ಪಾಂಡೇಶ್ವರ ಶಾಲಾ ವಠಾರ,ಪಾಂಡೇಶ್ವರ ರಸ್ತೆ ಇತರ ಕಡೆಗಳಲ್ಲಿ ಗಿಡ ನೆಟ್ಟು ಸಂಭ್ರಮಿಸಲಾಯಿತು.

ಪಾಂಡೇಶ್ವರ ಮಹಿಳಾ ಮಂಡಲದ ಕಛೇರಿಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತ್ರತ್ವದಲ್ಲಿ ಮಣೂರು ಫ್ರೆಂಡ್ಸ್,ಹಂದಟ್ಟು ಮಹಿಳಾ ಬಳಗ, ಗೆಳೆಯರ ಬಳಗ ಕಾರ್ಕಡ , ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದೊಂದಿಗೆ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ, ಮಹಿಳಾ ಮಂಡಲ ಪಾಂಡೇಶ್ಚರ ಸಾಸ್ತಾನ, ಸಂಜೀವಿನಿ ಒಕ್ಕೂಟ ಪಾಂಡೇಶ್ವರ ಗ್ರಾ.ಪಂ ಇವರುಗಳ ಸಂಯೋಜನೆಯೊಂದಿಗೆ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಅಧ್ಯಕ್ಷ ಅರವಿಂದ ಶರ್ಮ ಚಾಲನೆ ನೀಡಿದರು.

Leave a Reply

Your email address will not be published. Required fields are marked *