Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಆನೆಗುಡ್ಡೆ -ದಿವ್ಯ ಸತ್ಸಂಗ ಕಾರ್ಯಕ್ರಮ

ಕೋಟ:ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್‍ನ ಹಿರಿಯ ಸ್ವಾಮಿಯವರಾದ ಸ್ವಾಮಿ ಸೂರ್ಯಪಾದರು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ವಿನಾಯಕ ಸಭಾ ಗ್ರಹದಲ್ಲಿ ದಿವ್ಯ ಸತ್ಸಂಗ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಟ್ರಸ್ಟ್ ಆಗಿರುವ ರಮಣ ಉಪಾಧ್ಯ ಹಾಗೂ ರವಿರಾಜ ಉಪಾಧ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸತೀಶ್ ವಡ್ಡರ್ಸೆ ನಿರೂಪಿಸಿದರು. ಹಾರ್ಟ್ ಆಫ್ ಲಿವಿಂಗ್ ಘಟಕದ ಪ್ರಮುಖರಾದ ಆನಂದ್ ಸಿ ಕುಂದರ್, ಸುರೇಶ್ ಗಾಣಿಗ, ಪ್ರದೀಪ್ ಪೂಜಾರಿ, ಜಯರಾಮ ಗಾಣಿಗ, ಹಾಗೂ ಆರ್ಟ್ ಆಫ್ ಲಿವಿಂಗ್‍ನ ಶಿಕ್ಷಕರು ಉಪಸ್ಥಿತರಿದ್ದರು 150ಕ್ಕೂ ಹೆಚ್ಚು ಮಿಕ್ಕಿ ಜನರು ಸತ್ಸಾಂಗದಲ್ಲಿ ಭಾಗಿಯಾಗಿಯಾದರು.

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ವಿನಾಯಕ ಸಭಾ ಗ್ರಹದಲ್ಲಿ ದಿವ್ಯ ಸತ್ಸಾಂಗ ಕಾರ್ಯಕ್ರಮವನ್ನು ಸ್ವಾಮಿ ಸೂರ್ಯಪಾದರು ನಡೆಸಿಕೊಟ್ಟರು.

Leave a Reply

Your email address will not be published. Required fields are marked *