News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹಾಡಿಕೆರೆ- ಬಡ ಕುಟುಂಬಕ್ಕೆ ಜೋಯ್ ಅಲುಕಾಸ್‌ನಿಂದ ಮನೆ ಹಸ್ತಾಂತರ

ಕೋಟ : ಇಲ್ಲಿನ ಬಡಕುಟುಂಬವಾದ ಕೋಟಟದ ಹಾಡಿಕೆರೆಬೆಟ್ಟು ಪರಿಸರದ  ಗೌರಿ ಎನ್ನುವಾಕೆಗೆ ಪ್ರಸಿದ್ಧ ಜ್ಯುವೆಲರಿ ಶೋ ರೂಮ್ ಜೋಯ್ ಅಲುಕಾಸ್ ವತಿಯಿಂದ ಸುಮಾರು 9ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ನೂತನ ಗೃಹವನ್ನು ಮಂಗಳವಾರ ಹಸ್ತಾಂತರಿಸಿತು. ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೀ ಹಸ್ತಾಂತರಿಸಿ ಉದ್ಘಾಟಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಡವರಿಗೆ ಅಥವಾ ನಿರ್ಗತಿಕರಿಗೆ ನೆರವು ನೀಡಲು ಜಿಲ್ಲೆಯ ವಿವಿಧ ಕಂಪನಿಗಳು ಮುಂದಾಗಿರುವುದು ಶ್ಲಾಘನೀಯ ಇಂತಹ ಕೈಂಕರ್ಯಗಳು ಇನ್ನಷ್ಟು ಬಡವರ ಕಣ್ಞಿರೊಸುವ ಕಾಯಕದಲ್ಲಿ ನಿರತರಾಗಲಿ ಎಂದು ಹಾರೈಸಿದರು.
ಜೋಯ್ ಅಲುಕಾಸ್ ಶಾಖಾ ವ್ಯವಸ್ಥಾಪಕ ವಿರೇಂದ್ರ, ಮಾರ್ಕೇಟಿAಗ್ ವಿಭಾಗದವರು,ಸಿಬ್ಬಂದಿವರ್ಗ, ಕೋಟ ಗ್ರಾಮಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯರಾದ ಅಜಿತ್ ದೇವಾಡಿಗ,ಚಂದ್ರ ಪೂಜಾರಿ,ಶೇಖರ್ ಜಿ, ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಗುತ್ತಿಗೆದಾರರಾದ ಸಂತೋಷ್ ಮಣೂರು, ನಾಗರಾಜ್ ಶೇವಧಿ,ಹಾಡಿಕೆರೆ ಶನೀಶ್ವರ ದೇಗುಲದ ಧರ್ಮದರ್ಶಿ ಭಾಸ್ಕರ್ ಸ್ವಾಮಿ ಮತ್ತಿತರರು ಇದ್ದರು


ಕೋಟಟದ ಹಾಡಿಕೆರೆಬೆಟ್ಟು ಪರಿಸರದ  ಗೌರಿ ಎನ್ನುವಾಕೆಗೆ ಪ್ರಸಿದ್ಧ ಜ್ಯುವೆಲರಿ ಶೋ ರೂಮ್ ಜೋಯ್ ಅಲುಕಾಸ್ ವತಿಯಿಂದ ಸುಮಾರು 9ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ನೂತನ ಗೃಹವನ್ನು ಮಂಗಳವಾರ ಹಸ್ತಾಂತರಿಸಿತು.
ಕೋಟ.ಜೂ.4 ಮನೆ ಹಸ್ತಾಂತರ

Leave a Reply

Your email address will not be published. Required fields are marked *