Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಳೆದು ಹೋದ ರೆಡ್ ಮಿ ಮೊಬೈಲ್ ಅನ್ನು ಹಿಂದಿರುಗಿಸಿ ಮಾನವೀಯತೆಯಿಂದ ಮೆರೆದ ಜಯರಾಜ್ ಸಾಲಿಯಾನ್

ಕೋಟ : ಇತ್ತೀಚಿಗೆ ಅಸ್ಸಾಂ ಮೂಲದ ಮೈಕಲ್ ರವರು  ರೆಡ್ ಮಿ ಮೊಬೈಲ್ ಅನ್ನು ಕೋಟ ಪರಿಸರದಲ್ಲಿ ಕಳೆದುಕೊಂಡಿದ್ದು, ಸಾಕಷ್ಟು ಹುಡುಕಿದರೂ ಸಿಗದೇ ಕಂಗಲಾಗಿದ್ದರು. ಕಳೆದು ಹೋದ ಮೊಬೈಲ್ ಕೋಟ ಪಡುಕೆರೆ ಮೂಲದ ಜಯರಾಜ್ ಸಾಲಿಯಾನರವರಿಗೆ ಸಿಕ್ಕಿತ್ತು. ಅದನ್ನು ಅವರು ಮೊಬೈಲ್ ವಾರಸುದಾರರಾದ ಮೈಕಲ್ ರವರಿಗೆ ಕೋಟದ ಶ್ರೀ ಶಾಸ್ತ್ರ ಮೊಬೈಲ್ಸ್ ನಲ್ಲಿ ಆದಿತ್ಯ ಕೋಟ ರವರ ಸಮಕ್ಷಮದಲ್ಲಿ ಮೊಬೈಲ್ ನ್ನು ಹಿಂದಿರುಗಿಸುವುದರ ಮೂಲಕ  ಮಾನವತೆಯಿಂದ ಮೆರೆದಿದ್ದು,  ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Leave a Reply

Your email address will not be published. Required fields are marked *