Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶ್ರೀವಿಶ್ವಕರ್ಮ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಚೇಂಪಿ ಸಾಲಿಗ್ರಾಮ ಕೊಡುಗೆ ಹಸ್ತಾಂತರ

ಕೋಟ: ಶ್ರೀ ವಿಶ್ವಕರ್ಮ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಚೇಂಪಿ ಸಾಲಿಗ್ರಾಮ ಇವರ ವಾರ್ಷಿಕ ಸಭೆ ಹಾಗೂ ಕೊಡುಗೆ ಹಸ್ತಾಂತರ ಕಾರ್ಯಕ್ರಮವು ಶ್ರೀ ವಿರಾಡಿಶ್ವಬ್ರಾಹ್ಮಣ ಸಮಾಜೋಧ್ಧಾರಕ ಸಂಘದಲ್ಲಿ ಗುರುಸ್ವಾಮಿ ರಾಘವೇಂದ್ರ ಆಚಾರ್ಯ ಸಾಹೇಬರಕಟ್ಟೆ ಅಧ್ಯಕ್ಷತೆಯಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಕೋಟ ಶ್ರೀ ವಿರಾಡಿಶ್ವಬ್ರಾಹ್ಮಣ ಸಮಾಜೋಧ್ಧಾರಕ ಸಂಘದ ಅಧ್ಯಕ್ಷ ಮಣೂರು ಸುಬ್ರಾಯ ಆಚಾರ್ಯ ,ವಿಶ್ವಕರ್ಮ ಕಲಾವೃಂದದ ಅಧ್ಯಕ್ಷ ವೆಂಕಟೇಶ ಆಚಾರ್ಯ ಸಾಲಿಗ್ರಾಮ, ವಿಶ್ವ ಜ್ಯೋತಿ ಮಹಿಳಾ ಬಳಗದ ಅಧ್ಯಕ್ಷೆ ಸವಿತಾ ಚಂದ್ರಶೇಖರ ಅಯ್ಯಪ್ಪ ಭಕ್ತವೃಂದದ ಪ್ರಮುಖರಾದ ರಾಜೇಶ್ ಆಚಾರ್ಯ ಚೇಂಪಿ , ಕಿರಣ ಆಚಾರ್ಯ ರಿಪ್ಪನ್ ಪೇಟೆ, ದಿನೇಶ್ ಆಚಾರ್ಯ ಚೇಂಪಿ, ಮತ್ತಿತರರು ಉಪಸ್ಥಿತರಿದ್ದರು. ಕೋಟ ಶ್ರೀ ವಿರಾಡಿಶ್ವಬ್ರಾಹ್ಮಣ ಸಮಾಜೋಧ್ಧಾರಕ ಸಂಘಕ್ಕೆ ಎರಡು ಅನ್ನ ಬಡಿಸುವ ಟ್ರಾಲಿಯನ್ನು ಕೊಡುಗೆಯಾಗಿ ನೀಡಲಾಯಿತು. ದಿನೇಶ್ ಆಚಾರ್ಯ ಚೇಂಪಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಶ್ರೀ ವಿಶ್ವಕರ್ಮ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಚೇಂಪಿ ಸಾಲಿಗ್ರಾಮ ಇವರ ವಾರ್ಷಿಕ ಸಭೆಯಲ್ಲಿ ಕೋಟ ಶ್ರೀ ವಿರಾಡಿಶ್ವಬ್ರಾಹ್ಮಣ ಸಮಾಜೋಧ್ಧಾರಕ ಸಂಘಕ್ಕೆ ಎರಡು ಅನ್ನ ಬಡಿಸುವ ಟ್ರಾಲಿಯನ್ನು ಕೊಡುಗೆಯಾಗಿ ನೀಡಲಾಯಿತು. ಗುರುಸ್ವಾಮಿ ರಾಘವೇಂದ್ರ ಆಚಾರ್ಯ ಸಾಹೇಬರಕಟ್ಟೆ ಕೋಟ ಶ್ರೀ ವಿರಾಡಿಶ್ವಬ್ರಾಹ್ಮಣ ಸಮಾಜೋಧ್ಧಾರಕ ಸಂಘದ ಅಧ್ಯಕ್ಷ ಮಣೂರು ಸುಬ್ರಾಯ ಆಚಾರ್ಯ ,ವಿಶ್ವಕರ್ಮ ಕಲಾವೃಂದದ ಅಧ್ಯಕ್ಷ ವೆಂಕಟೇಶ ಆಚಾರ್ಯ ಸಾಲಿಗ್ರಾಮ ಇದ್ದರು.

Leave a Reply

Your email address will not be published. Required fields are marked *