Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಅಮೃತೇಶ್ವರೀ ಹಾಲು ಹಬ್ಬ ಗೆಂಡ ಹಾಗೂ ತುಲಾಭಾರ ಸೇವೆ ಸಂಪನ್ನ

ಕೋಟ: ಇಲ್ಲಿನ ಕೋಟ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಬುಧವಾರ ಹಾಗೂ ಗುರುವಾರ ಸಂಪನ್ನಗೊAಡಿತು.
ಬುಧವಾರ ರಾತ್ರಿ ಹಾಲಿಟ್ಟು ಸೇವೆ ,ಗೆಂಡಸೇವೆ ಕಾರ್ಯಕ್ರಮಗಳು ಭಕ್ತ ಸಮುದಾಯದ ಹರಕೆಯೊಂದಿಗೆ ಪೂರ್ಣಗೊಂಡಿತು.

ಸಾವಿರಾರು ಭಕ್ತರು ಗೆಂಡಸೇವೆ, ಮಹಾ ಅನ್ನಸಂತಪರ್ಣೆಯಲ್ಲಿ ಭಾಗಿಯಾದರು..ಗುರುವಾರ ಪೂರ್ವಾಹ್ನ ಢಕ್ಕೆ ಬಲಿ,ತುಲಾಭಾರ ಸೇವೆ , ಮಹಾ ಅನ್ನಪ್ರಸಾದ ವಿತರಣೆ ನಡೆಯಿತು.

ಶ್ರೀ ದೇಗುಲದ ಆಡಳಿತಾಧಿಕಾರಿ,ತಹಶೀಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ,ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ, ಆಡಳಿತ ಮಂಡಳಿಯ ಪೂರ್ವಾಧ್ಯಕ್ಷ ಆನಂದ್ ಸಿ ಕುಂದರ್ ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ, ಟ್ರಸ್ಟಿ ಸದಸ್ಯರು,ಅರ್ಚಕ ಪ್ರತಿನಿಧಿಗಳು ಮತ್ತಿತರರು ಇದ್ದರು.

ಜಾತ್ರೋತ್ಸವದ ಹಿನ್ನಲೆಯಲ್ಲಿ ಸಾಂಸ್ಕöತಿಕ ಹಬ್ಬ
ಶ್ರೀ ಕ್ಷೇತ್ರದ ಜಾತ್ರೋತ್ಸವದ ಅಂಗವಾಗಿ ಟ್ರಾವೆಲಿಂಕ್ಸ್ ಫ್ರೆಂಡ್ಸ್ ಕೋಟ ಗಾಂಧಿ ಮೈದಾನದಲ್ಲಿ ಸಂಗೀತ ರಸಮಂಜರಿ,ಡಾನ್ಸ್ ಅಮೃತೋತ್ಸವ ಕಾರ್ಯಕ್ರಮಗಳು ಜಾತ್ರೆಗೆ ಮೆರುಗು ನೀಡಿತು.ಇತ್ತ ದೇಗುಲದ ಪಾರ್ಕಿಂಗ್ ಸ್ಥಳದಲ್ಲಿ ಅಮೃತ ಯುವಕ ಸಂಘದ ವತಿಯಿಂದ ನಮ್ಮೂರ ಹಬ್ಬ ಎರಡು ದಿನಗಳ ಕಾಲ ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳು ಹಮ್ಮಿಕೊಂಡಿತು. ಅಲ್ಲದೆ ಗುರುವಾರ ಕೋಟ ಗಾಂಧಿಮೈದಾನದಲ್ಲಿ ಸುರೇಶ್ ಗಿಳಿಯಾರ್ ಸಾರಥ್ಯದಲ್ಲಿ ಸಂಗೀತ ರಸಧಾರೆ ಸಂಗೀತೋತ್ಸವ ನೆರವರೆತು.

ಇಲ್ಲಿನ ಕೋಟ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಬುಧವಾರ ಹಾಗೂ ಗುರುವಾರ ಸಂಪನ್ನಗೊAಡಿತು.
ಆಡಳಿತ ಮಂಡಳಿಯ ಪೂರ್ವಾಧ್ಯಕ್ಷ ಆನಂದ್ ಸಿ ಕುಂದರ್ ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ, ಟ್ರಸ್ಟಿ ಸದಸ್ಯರು,ಅರ್ಚಕ ಪ್ರತಿನಿಧಿಗಳು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *