Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬೈಂದೂರು: ಗರಗರ ಮಂಡಲ ಜುಗಾರಿ, ಅಡ್ಡೆ ಮೇಲೆ ದಾಳಿ, ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು

ಬೈಂದೂರು: ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಮಂಕಿ ಕಡೆಗೆ ಹೋಗುವ ರಸ್ತೆಯ ಬಳಿ ಕೆ.ಸಿ.ಡಿ.ಸಿ ಗೆ ಸಂಬಂಧಿಸಿದ ಗೇರು ಹಾಡಿಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು, ಜುಗಾರಿ ಆಡುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ,

ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್. ನಾಯಕ್ ಹಾಗೂ ಸಿಬ್ಬಂದಿ ಚಂದ್ರಶೇಖರ, ಸಂದೀಪ್ ಕುರಾಣಿ ಜೀಪು ಚಾಲಕ ನಾಗರಾಜ್ ರವರು ರಾತ್ರಿ ವೇಳೆ ನಾಯಕವಾಡಿ ಭಾಗದಲ್ಲಿ ಗಸ್ತು ತಿರುಗುವ ವೇಳೆ ಬಂದ ಮಾಹಿತಿಯ ಮೇರೆಗೆ ಗರಗಲ್ ಮಂಡಲ ಜುಗಾರಿ ಅಡ್ಡೆ ಮೇಲೆ ದಾಳಿ ಮಾಡಿ ಆರೋಪಿ ಪ್ರಕಾಶ್ ಪೂಜಾರಿ ಗುಜ್ಜಾಡಿ ದೊಡ್ಮನೆ, ವಶಕ್ಕೆ ಪಡೆದು, ಆರೋಪಿ ಜುಗಾರಿಗೆ ಬಳಸಿದ ಪ್ಲಾಸ್ಟಿಕ್ ಸೀಟನ್ನು ಇತ್ಯಾದಿ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *