Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ಜರಗಲಿರುವ ಗುರು ಸಂದೇಶ ಜಾಥಾದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ಜರಗಲಿರುವ ಗುರು ಸಂದೇಶ ಜಾಥಾದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಬನ್ನಂಜೆ ಬಿಲ್ಲವ  ಸಂಘದಲ್ಲಿ ಜರಗಿತು. ವೇದಿಕೆಯ ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿಯವರು ಸ್ವಾಗತದೊಂದಿಗೆ ಜಾಥಾದ ರೂಪುರೇಷೆಗಳನ್ನು ಪ್ರಸ್ತಾವಿಸಿದರು.

ಮುಖ್ಯ ಅತಿಥಿಗಳಾಗಿ ಹಿರಿಯ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಜನಾರ್ಧನ್ ತೋನ್ಸೆ,
ವೆಹಿಕಲ್ ಸರ್ವೇಯರ್ ನಂದ ಕಿಶೋರ್, ಉಪ್ಪೂರು ಬಿಲ್ಲವ ಸೇವಾ ಸಂಘ ಅಧ್ಯಕ್ಷರಾದ ರಾಜು ಪೂಜಾರಿ, ಸಂತೆಕಟ್ಟೆ ಬಿಲ್ಲವ ಸೇವಾ ಸಂಘ ಅಧ್ಯಕ್ಷರಾದ ಶೇಖರ್ ಗುಜ್ಜರ್‌ಬೆಟ್ಟು, ಯುವವಾಹಿನಿ ಉಡುಪಿ ಅಧ್ಯಕ್ಷರಾದ
ಅಮಿತಾಂಜಲಿ ಕಿರಣ್, ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯತೀಶ್ ಕುಮಾರ್, ಚಲನಚಿತ್ರ ನಟ ಸೂರ್ಯೋದಯ್ ಪೆರಂಪಳ್ಳಿ, ಯುವವಾಹಿನಿ ಕಟಪಾಡಿ ಘಟಕ ಅಧ್ಯಕ್ಷರಾದ ಪ್ರತಿಮಾ ವಿ ಪೂಜಾರಿ, ಪಕ್ಕಿಬೆಟ್ಟು ಗರೋಡಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ವಿಠ್ಠಲ ಪೂಜಾರಿ, ವೇದಿಕೆಯ ಗೌರವ ಸಲಹೆಗಾರರಾದ ಸುಧಾಕರ ಡಿ ಅಮೀನ್, ಮಾಧವ ಪಾಲನ್ ಕಾಪು, ಶೇಖರ ಪೂಜಾರಿ ಅಂಜಾರು, ಜಾಥಾ ಸಂಚಾಲಕರಾದ ಕೃಷ್ಣಾನಂದ ಮಲ್ಪೆ,ಪ್ರಕಾಶ್ ಅಂಚನ್, ರಾಜೇಶ್ ಸುವರ್ಣ, ಶ್ರೀಧರ ಅಮೀನ್, ಜಯ ಸನಿಲ್ ಲತಾ ಸುವರ್ಣ ಕಟಪಾಡಿ , ದಯಾಶಿನಿ ಪಂದುಬೆಟ್ಟು,ಸುಕನ್ಯಾ ರಾಘವ,ಪ್ರಕಾಶ್ ಅಂಚನ್, ರಾಮ ಪೂಜಾರಿ ಸಂತೆಕಟ್ಟೆ,  ಪರ್ಕಳ ಬಿಲ್ಲವ ಸಂಘದ ಅಧ್ಯಕ್ಷರಾದ ಅನಿಲ್ ಪೂಜಾರಿ  ಹಾಗೂ ಬಿಲ್ಲವ  ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ವೇದಿಕೆಯ ಸಮಿತಿ‌ ಸದಸ್ಯರು ಉಪಸ್ಥಿತರಿದ್ದರು, ಉಪನ್ಯಾಸಕರಾದ ದಯಾನಂದ ಡಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಕಲ್ಮಾಡಿ ವಂದಿಸಿದರು.

Leave a Reply

Your email address will not be published. Required fields are marked *