Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಸ್ತಾನ – ಶ್ರೀ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಇದರ ವಾರ್ಷಿಕ ಮಹಾಸಭೆ

ಕೋಟ: ಇಲ್ಲಿನ ಸಾಸ್ತಾನ ಶ್ರೀ ಬ್ರಹ್ಮಬೈದರ್ಕಳ ಗೋಳಿಗರಡಿ ಬಿಲ್ಲವ ಸೇವಾ ಸಂಘ  ಇದರ ವಾರ್ಷಿಕ ಮಹಾಸಭೆ ಭಾನುವಾರ ಗೋಳಿಗರಡಿ ವಠಾರದಲ್ಲಿ ಜರಗಿತು. ಬಿಲ್ಲವ ಸಂಘದ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಬಿಲ್ಲವ ಸಭಾಭವನ ಸ್ಥಳ ಖರೀದಿ ವಿವಿಧ ಕಾಮಗಾರಿಗಳ ಬಗ್ಗೆ ಸರಕಾರದ ಅನುದಾನಗಳ ಕುರಿತು ಮಾಹಿತಿ ನೀಡಿದರು.ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ಜರಗಿತು.

ಸಭೆಯಲ್ಲಿ ಗೋಳಿಗರಡಿ ದೈವಸ್ಥಾನದ ಆಡಳಿತ ಮುಕ್ತೇಸರ ಅಧ್ಯಕ್ಷ ಜಿ.ವಿಠ್ಠಲ್ ಪೂಜಾರಿ,ಕ್ಷೇತ್ರದ ಪಾತ್ರಿ ಜಿ.ಶಂಕರ್ ಪೂಜಾರಿ,ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ರತ್ನಾ ಜೆ ರಾಜ್, ಬಿಲ್ಲವ ಸಂಘದ ಕೋಶಾಧಿಕಾರಿ ಐರೋಡಿ ವಿಜಯ ಪೂಜಾರಿ, ಮೂಡಹಡು ಗ್ರಾಮ ಸಮಿತಿ ಅಧ್ಯಕ್ಷ ರಾಜು ಪೂಜಾರಿ,ಪಾಂಡೇಶ್ವರ ಸಮಿತಿಯ ಸುರೇಶ್ ಪೂಜಾರಿ, ಐರೋಡಿ ಗ್ರಾಮಸಮಿತಿ ಅಧ್ಯಕ್ಷ ಸುಧಾಕರ ಪೂಜಾರಿ, ಬಾಳ್ಕುದ್ರು ಸಮಿತಿ ಅಧ್ಯಕ್ಷ ವಿಜಯ ಪೂಜಾರಿ,ಗುಂಡ್ಮಿ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ ಸಂಬ್ಲೋಡ್ಲು,ಯಡಬೆಟ್ಟು ಗುರಿಕಾರದ ಮಹಾಲಿಂಗ ಪೂಜಾರಿ,ಗುಂಡ್ಮಿಯ ಲಕ್ಷ÷್ಮಣ ಪೂಜಾರಿ, ಐರೋಡಿ ಗುರಿಕಾರ ಬಸವ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಘದ ಕಾರ್ಯದರ್ಶಿ ಚಂದ್ರಮೊಹನ್ ನಿರ್ವಹಿಸಿದರು.

ಇಲ್ಲಿನ ಸಾಸ್ತಾನ ಬ್ರಹ್ಮಬೈದರ್ಕಳ  ಬಿಲ್ಲವ ಸೇವಾ ಸಂಘ  ಇದರ ವಾರ್ಷಿಕ ಮಹಾಸಭೆ ಬಿಲ್ಲವ ಸಂಘದ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಜರಗಿತು. ಸಂಘದ ಪ್ರಧಾನಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ, ಗೋಳಿಗರಡಿ ದೈವಸ್ಥಾನದ ಆಡಳಿತ ಮುಕ್ತೇಸರ ಅಧ್ಯಕ್ಷ ಜಿ.ವಿಠ್ಠಲ್ ಪೂಜಾರಿ,ಕ್ಷೇತ್ರದ ಪಾತ್ರಿ ಶಂಕರ್ ಪೂಜಾರಿ,ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ರತ್ನಾ ಜೆ ರಾಜ್,ಕೋಶಾಧಿಕಾರಿ ಐರೋಡಿ ವಿಜಯ ಪೂಜಾರಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *