Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರಂಬಳ್ಳಿ : ವಿಪ್ರ ಮಹಿಳಾ ದಿನಾಚರಣೆ – ಗಾರ್ಗಿ  ಏನ್ ಶಬರಾಯ ಅವರಿಗೆ ಸನ್ಮಾನ

ಉಡುಪಿ  ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯಿಂದ “ವಿಪ್ರ ಮಹಿಳಾ ದಿನಾಚರಣೆ 2025″ ನ್ನು  ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತ್ತಿಯಾಗಿ ಆಗಮಿಸಿದ ಡಾ. ರಾಜೇಶ್ವರಿ ಜಿ ಭಟ್ , HOD , OBG  dept ಕೆಎಂಸಿ  ಮಣಿಪಾಲ ಇವರು ಮಹಿಳೆಯರ  PCOD ಸಮಸ್ಯೆ ಬಗ್ಗೆ  ಉಪನ್ಯಾಸ ನೀಡಿದರು .

ಬಹುಮುಖ ಪ್ರತಿಭೆಯ ವಿದುಷಿ ಶ್ರೀಮತಿ  ಗಾರ್ಗಿ ಎನ್ ಶಬರಾಯ ಅವರಿಗೆ  “ಸಂಗೀತ ರತ್ನ ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರಂಬಳ್ಳಿ ವಲಯದ ಅಧ್ಯಕ್ಷ ಕೀಳಂಜೆ ಶ್ರೀಕೃಷ್ಣರಾಜ್ ಭಟ್ ಸಭೆಯ ಅಧ್ಯಕ್ಷತೆ ವಹಿಸಿ ಪ್ರಸ್ತಾವನೆಗೈದರು.

ಇದಕ್ಕೂ ಮೊದಲು ವಿಪ್ರ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಸುಧಾ ಹರಿದಾಸ್ ಭಟ್ ನಡೆಸಿದರು .ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರು ಹಾಗೂ ನೂತನ ಸದಸ್ಯರನ್ನು  ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕಾರ್ಯದರ್ಶಿ ನಾಗರಾಜ್ ಭಟ್, ಕೋಶಾಧಿಕಾರಿ ಅಜಿತ್ ಬಿಜಾಪುರ, ಮಹಿಳಾ ಪ್ರತಿನಿಧಿ ಶ್ಯಾಮಲಾ ರಾವ್ ಉಪಸ್ಥಿತರಿದ್ದರು. ಕವಿತಾ ಲಕ್ಷ್ಮೀನಾರಾಯಣ, ವಸುಧಾ ಶ್ರೀಕೃಷ್ಣರಾಜ್, ರಾಧಿಕಾ ಚಂದ್ರಕಾಂತ್, ಜಯಶ್ರೀ ಬಾರಿತ್ತಾಯ ಸಹಕರಿಸಿದರು. ಅಂಕಿತಾ ನಿರೂಪಿಸಿ ಪೂರ್ಣಿಮಾ ಹೆಬ್ಬಾರ್ ವಂದಿಸಿದರು.

Leave a Reply

Your email address will not be published. Required fields are marked *