
ವರದಿ : ಅಶ್ವಿನಿ ಅಂಗಡಿ
ಬಾಗಲಕೋಟೆ : ಎಲ್ಲ ಸಂಸ್ಕೃತಿಯನ್ನು ಸಾರವನ್ನು ಜೀರ್ಣಿಸಿಕೊಂಡು ಮನುಷ್ಯ ಬೆಳೆಯಬೇಕು, ಸಣ್ಣ ಕಥೆಗಳ ಮೂಲಕ ಇತಿಹಾಸದ ಚರಿತ್ರೆಯನ್ನು ಅನುಭವಕ್ಕೆ ತರುವುದು ಮಾಸ್ತಿ ಅವರ ಸಾಹಿತ್ಯದ ಮುಖ್ಯ ಉದ್ದೇಶವಾಗಿತ್ತು, ಮಾಸ್ತಿ ಕನ್ನಡದ ಆಸ್ತಿ ಎಂದು ದಾರಾವಾಡ ಕರ್ನಾಟಕ ವಿಶ್ವವಿದ್ಯಾಲಯ ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಪಕರಾದ ಡಾ.ಮಲ್ಲಪ್ಪ ಬಂಡಿ ಹೇಳಿದರು
ಶಿವಾನುಭವ ಸಮಿತಿ ಹಾಗೂ ಸಾಹಿತ್ಯ ಸಂಸ್ಕೃತಿ ಸಂವಹನ ವೇದಿಕೆ ಚರಂತಿಮಠ ಬಾಗಲಕೋಟೆ ಸಹಯೋಗದಲ್ಲಿ ಜ್ಞಾನಪೀಠ ಪುರಸ್ಕೃತರ ಸಾಹಿತ್ಯ ಸಂವಾದ ತಿಂಗಳ ಉಪನ್ಯಾಸ ಮಾಲಿಕೆ 4 ರಲ್ಲಿ ಜ್ಞಾನಪೀಠ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಕಥನ ಸಾಹಿತ್ಯದಲ್ಲಿ ಜೀವನದೃಷ್ಟಿ ಕುರಿತು ಉಪನ್ಯಾಸ ನೀಡಿದ ಅವರು, ಎಲ್ಲವನ್ನು ದಾಟಿ ನಿಲ್ಲುವ ಚೈತನ್ಯ ಶಕ್ತಿ ಮನುಷ್ಯನಲ್ಲಿದೆ ಎಂದು ನಂಬಿದ ಸಾಂಸ್ಕೃತಿಕ ಪರಂಪರೆ ನಮ್ಮದು, ಇಂಥ ಪರಂಪರೆಯ ದರ್ಶನ ದೃಷ್ಠಿಯನ್ನು ತಮ್ಮ ಕಥೆ ಕಾದಂಬರಿಗೆ ಆಧಾರ ಸ್ಥಂಭವಾಗಿಟ್ಟು ಕೋಂಡು ಬರವಣಿಗೆಯನ್ನು ಮಾಡಿದವರು ಮಾಸ್ತಿ.
ಕನ್ನಡಕ್ಕೆ ‘ಸಣ್ಣಕತೆ’ ಎಂಬ ಹೊಸ ಪ್ರಕಾರವನ್ನು ಕೊಟ್ಟ ಮಾಸ್ತಿ , ಕನ್ನಡ ಸಣ್ಣಕತೆಗಳ ಪಿತಾಮಹ”, ”ಕನ್ನಡದ ಆಸ್ತಿ” ಎಂದೇ ಪ್ರಸಿದ್ಧರಾದ ಡಾ|| ಮಾಸ್ತಿ ವೆಂಕಟೇಶ ಅಯ್ಯಂಗಾರರು ಸಾಹಿತ್ಯದ ಸರ್ವಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಸಾಧಕ. ತಮ್ಮ ಉನ್ನತ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ನಂತರ ಕನ್ನಡನಾಡು ನುಡಿಯ ಉತ್ಕರ್ಷಕ್ಕೇ ತಮ್ಮ ಬದುಕನ್ನು ಮುಡಿಪಾಗಿಟ್ಟವರು. ಜ್ಞಾನಪೀಠ ಪ್ರಶಸ್ತಿ ವಿಜೇತರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದ್ದರು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆಶಿರ್ವಚನ ನೀಡಿದ ಚರಂತಿಮಠದ ಪೂಜ್ಯರಾದ ಪ್ರಭುಸ್ವಾಮಿಗಳು ಮಾಸ್ತಿ ಅವರು ಕನ್ನಡ ಸಾಹಿತ್ಯದ ಸೀಮಾ ಪುರುಷರಾಗಿದ್ದವರು, ಬದುಕಿನ ಪರಿರ್ವತನೆಗಾಗಿ ಸಾಹಿತ್ಯ, ಕಥೆಗಳು ಮುಖ್ಯವಾಗಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ವಿ.ವಿ.ಸಂಘದ ಆಡಳಿತಾಧೀಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ವಹಿಸಿದ್ದರು, ವೇದಿಕೆ ಮೇಲೆ ಸಿದ್ದರಹಳ್ಳಿ ಗವಿಮಠದ ಪೂಜ್ಯರಾದ ಮಲ್ಲಿಕಾರ್ಜುನ ಸ್ವಾಮಿಗಳು ಉಪಸ್ಥಿತರು, ಡಾ. ನಂಜುoಡಸ್ವಾಮಿ ಸ್ವಾಗತಿಸಿದರು, ಐ.ಕೆ.ಮಠದ ಕಾರ್ಯಕ್ರಮ ನಿರೂಪಿಸಿದರು, ನಂದಿನಿ ದೊಡಮನಿ ವಂದಿಸಿದರು.
Leave a Reply