Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸ.ಹಿ.ಪ್ರಾ.ಶಾಲೆ ಹೊಸಾಳ ಬಾರ್ಕೂರು; ಉಚಿತ ನೋಟ್‌ ಪುಸ್ತಕ  ಮತ್ತು ಕಲಿಕೋಪಕರಣ ವಿತರಣೆ; ಅಂತರಾಷ್ಟ್ರೀಯ ಯೋಗದಿನಾಚರಣೆ ಆಚರಣೆ

ಬಾರ್ಕೂರು : ದಿನಾಂಕ 21/06/2025 ರಂದು  ನಮ್ಮ  ಸಂಸ್ಥೆಯ  ವಿದ್ಯಾರ್ಥಿಗಳಿಗೆ ಪೂರ್ತಿ ವರ್ಷಕ್ಕಾಗುವಷ್ಟು ನೋಟ್‌ಪುಸ್ತಕ  ದಾನಿಗಳಾದ  ಕಿರಣ್ ಪೂಜಾರಿ , ಕರ್ನಾಟಕ ರಾಜ್ಯ  ಪತ್ರಿಕೋದ್ಯಮ ಸಂಘ (ರಿ.), ಉಡುಪಿ  ಜಿಲ್ಲಾ ಅಧ್ಯಕ್ಷರು., ಪ್ರವೀಣ ನಾಗರಮಠ ಗ್ರಾ.ಪಂ. ಸದಸ್ಯರು ಬಾರ್ಕೂರು, ಜಯಶಂಕರ್ ಪೂಜಾರಿ ಕೂಡ್ಲಿ. ಶಂಕರಾಚಾರ್ಯ  ದತ್ತಿ ನಿಧಿಯ  ಕಲಿಕೋಪಕರಣ ಪ್ರಾಯೋಜಕರು ಶ್ರೀ ಗಣೇಶ ಆಚಾರ್ಯ ಹಸ್ತಾಂತರ  ಮಾಡಿದರು.

ಎಸ್ .ಡಿ .ಎಮ್ .ಸಿ ಅಧ್ಯಕ್ಷ ಮಂಜುನಾಥ ಆಚಾರ್ಯ, ಉಪಾಧ್ಯಕ್ಷೆ  ಉಷಾ, ಪಂಚಾಯಿತಿಯ ಸದಸ್ಯರಾದ  ಅಶ್ವಿನಿ,  ಹಳೆವಿದ್ಯಾರ್ಥಿಸಂಘದ  ಶ್ರೀನಿವಾಸ  ನಾಗರಮಠ, ಪೋಷಕರು, ಎಸ್ ಡಿ  ಎಮ್  ಸಿ ಸದಸ್ಯರು ಉಪಸ್ಥಿತರಿದ್ದರು.  ಮುಖ್ಯೋಪಾಧ್ಯಾಯ  ಶ್ಯಾಮ ಸುಂದರ  ಶೆಟ್ಟಿ ಸ್ವಾಗತಿಸಿ,  ಶಿಕ್ಷಕಿಯರಾದ ಪಾರ್ವತಿ,  ಕಲಾವತಿ, ಸೌಮ್ಯ  ಸಹಕರಿಸಿದರು, ಗೀತಾ ಎನ್  ವಂದಿಸಿದರು.  ದಾನಿಗಳನ್ನು ಗೌರವಿಸಲಾಯಿತು

Leave a Reply

Your email address will not be published. Required fields are marked *