
ಕೋಟ: ಕೆ. ಡಿ. ಪಿ.ಸಭೆಯಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ನಡೆದುಕೊಂಡ ರೀತಿ ಖಂಡನಿಯ, ಕಾರ್ಕಳ ಶಾಸಕರು ಇನ್ನು ಹಿಂದಿನ ಸರಕಾರದ ಉಸ್ತುವಾರಿ ಸಚಿವರ ಗುಂಗಿನಲ್ಲೆ ಇದ್ದಂತ್ತಿದೆ.ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚಿಂತಿಸುವುದನ್ನು ಬಿಟ್ಟು ಒರ್ವ ನಿಷ್ಠಾವಂತ ಪೊಲೀಸ್ ಅಧಿಕಾರಿಯೊಂದಿಗೆ ನಡೆದುಕೊಂಡ ರೀತಿ ಬಿಜೆಪಿ ಸಂಸ್ಕçತಿಯನ್ನು ತೊರಿಸುತ್ತದೆ.
ಇದು ಜಿಲ್ಲೆಗೆ ಶೋಭೆತರುವಂತದಲ್ಲ, ಇದು ತನ್ನ ಅವಧಿಯಲ್ಲಿ ಅದ ಪರಶುರಾಮನ ಮೂರ್ತಿ ನಿರ್ಮಾಣದಲ್ಲಿ ಆದ ಅವ್ಯವಹಾರವನ್ನು ಮುಚ್ಚಿಹಾಕಲು ಪ್ರಯತ್ನಿಸುವಂತ್ತಿದೆ.ಇದು ಕೀಳುಮಟ್ಟದ ರಾಜಕೀಯವನ್ನು ತೊರ್ಪಡಿಸುತ್ತದೆ ಈ ರೀತಿಯ ವರ್ತನೆ ವಿರುದ್ಧ ಕೋಟ ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆ ಎಂದು ಬ್ಲಾಕ್ ಅಧ್ಯಕ್ಷ ಶಂಕರ್ ಎ ಕುಂದರ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Leave a Reply