• Sat. Mar 22nd, 2025

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಬೈಂದೂರು: ನಾಯಕವಾಡಿಯಲ್ಲಿ ಗೋ ಕಳ್ಳರ  ಪ್ರಯತ್ನ ವಿಫಲ: ಕಾರು ಬಿಟ್ಟು ಪರಾರಿ!!

ByKiran Poojary

Sep 12, 2024

ಬೈಂದೂರು:  ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯಿತಿನ ನಾಯಕವಾಡಿಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿ ನಿನ್ನೆ ತಡರಾತ್ರಿ ಗೋಕಳ್ಳರು ಮಾರುತಿ ಸಿಫ್ಟ್ ಕಾರಿನಲ್ಲಿ ಬಂದು ಹಸುಗಳನ್ನು ಕದ್ದು ಪರಾರಿಯಾಗುವ ಪ್ರಯತ್ನ ವಿಫಲಗೊಂಡಿದೆ.

ದಿನನಿತ್ಯದಂತೆ DAR ಪೊಲೀಸ್ ಸಿಬ್ಬಂದಿ ಕರ್ತವ್ಯ ಮುಗಿಸಿ  ನಾಯಕವಾಡಿಯ  ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂದಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ತಡರಾತ್ರಿ ಹೊರಗಡೆ ಶಬ್ದ ಕೇಳಿದ ಹಿನ್ನೆಲೆಯಲ್ಲಿ ಹೊರಗಡೆ ಬಂದು ನೋಡಿದಾಗ ಗೋ ಕಳ್ಳರು ಹಸುವನ್ನು  ಕದ್ದು ಪರಾರಿಯಾಗಲು ಯತ್ನಿಸುವ ವೇಳೆ ಭಯಭೀತರಾಗಿ ಮಾರುತಿ ಸ್ವಿಫ್ಟ್ ಕಾರ್ ಸ್ಥಳದಲ್ಲಿಯೇ  ಬಿಟ್ಟು ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಹರೀಶ್ ಆರ್ . ನಾಯ್ಕ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿರುತ್ತಾರೆ,

ಈ ಘಟನೆಗಯನ್ನು ಸ್ಥಳೀಯ ಜನಪ್ರತಿನಿಧಿಗಳು,  ಗಂಗೊಳ್ಳಿ ಹಿಂದೂ ಜಾಗರಣ ವೇದಿಕೆ ಮುಖಂಡರು ಮತ್ತು ಗ್ರಾಮಸ್ಥರು ತೀವ್ರವಾಗಿ ವಿರೋಧಿಸಿ , ಗೋ ಕಳ್ಳರನ್ನು ತಕ್ಷಣ ಸೆರೆಹಿಡಿದು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಘಟನಾ ಸ್ಥಳದಲ್ಲಿ ಸಿಸಿಟಿವಿ ವ್ಯವಸ್ಥೆ ಇದ್ದು ಹೆಚ್ಚಿನ ತನಿಖೆಗೆ ಸಹಕಾರಿ ಆಗುವ ನಿರೀಕ್ಷೆ ಇದೆ  ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಹೆಚ್ಚಿನ  ಕಾನೂನು ಪ್ರಕ್ರಿಯೆ ಮುಂದುವರೆದಿದೆ.

ವರದಿ ಪುರುಷೋತ್ತಮ್ ಪೂಜಾರಿ

Leave a Reply

Your email address will not be published. Required fields are marked *