Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಡಿ ಕನ್ಯಾಣ-ಶ್ರೀ ರಾಮ ಪ್ರಸಾದಿತ ಯಕ್ಷಗಾನ ಕಲಾ ಸಂಘದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿದ ನಾಡೋಜ ಡಾ.ಜಿ ಶಂಕರ್

ಕೋಟ: ಮಕ್ಕಳಿಗೆ ಯಕ್ಷಗಾನ ಕಲಿಕೆ ಕೇಂದ್ರವಾಗಿಸಿ ಆ ಮೂಲಕ ಸಂಸ್ಕಾರಭರಿತರಾಗಲು ಸಾಧ್ಯ ಎಂದು ನಾಡೋಜ ಡಾ.ಜಿ ಶಂಕರ್ ಅಭಿಪ್ರಾಯಪಟ್ಟರು.
ಶನಿವಾರ ಕೋಡಿ ಕನ್ಯಾಣ ಶ್ರೀರಾಮ ದೇಗುಲ ವಠಾರದ ಸಮೀಪ  ಶ್ರೀ ರಾಮ ಪ್ರಸಾದಿತ ಯಕ್ಷಗಾನ ಕಲಾ ಸಂಘದ ನೂತನ ಕಟ್ಟಡ ಉದ್ಘಾಟನೆ ಹಾಗೂ 38ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿ ಕಲಾ ಸಂಘದ ವತಿಯಿಂದ ಒಂದಿಷ್ಟು ವಿವಿಧ ರೀತಿಯ ಕಲೆಗಳ ಕೇಂದ್ರ ಸ್ಥಾನವಾಗಿ ಮೂಡಿಬರಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ರಾಮ ಪ್ರಸಾದಿತ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಜಗನಾಥ ಅಮೀನ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಉದ್ಯಮಿ ಸಿ.ಎ ನಜುಂಡ,ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್,ಆಶಿತ ಎಂಟರ್ ಪ್ರೆöÊಸಸ್ ಸಾಸ್ತಾನ ಇದರ ಮಾಲಿಕ ಆನಂದ ಮರಕಾಲ,ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಕಾರ್ವಿ,ಪಿಡಿಓ ರವೀಂದ್ರ ರಾವ್,ಉದ್ಯಮಿ ಮುತ್ತಪ್ಪ ಸಾಲಿಯಾನ್,ಸ್ಥಳದಾನಿ ಮಾಧವ ಉಪಾಧ್ಯಾ,ಮೊಗವೀರ ಯುವ ಸಂಘದ ಜಿಲ್ಲಾಧ್ಯಕ್ಷ ಜಯಂತ್ ಅಮೀನ್,ಶ್ರೀ ರಾಮದೇಗುಲದ ಸುರೇಶ್ ಕಾರ್ವಿ , ಮಾಜಿ ಅಧ್ಯಕ್ಷ ಜಯ ಕುಮಾರ್ ಎ.ಎಸ್,ಕೋಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಣ್ಣಪ್ಪ ಕುಂದರ್,ಮೀನುಗಾರ ಸಂಘದ ಉಪಾಧ್ಯಕ್ಷ ಉದಯ್ ಕಾಂಚನ್,ಮತ್ಸೊ÷್ಯÃದ್ಯಮಿ ಶಂಕರ್ ಕುಂದರ್,
ಯಕ್ಷಗಾನ ಸಂಘದ ಸ್ಥಾಪಾಕಾಧ್ಯಕ್ಷ ಮಹಾಬಲ ಭಂಡಾರಿ,ಕಾರ್ಯದರ್ಶಿ ಶ್ರೇಯಸ್ ಕರ್ಕೇರ, ಸ್ಥಳೀಯರಾದ ರಾಜೇಶ್ ಕರ್ಕೇರ,ಸಂಘದ ಯಕ್ಷಗಾನ ಕಲಿಕಾ ಕೇಂದ್ರ ಗುರುಗಳಾದ ಪ್ರತೀಶ್ ಕುಮಾರ್ ಬ್ರಹ್ಮಾವರ,ಕೋಟ ಸಿ ಎ ಬ್ಯಾಂಕ್ ನಿವೃತ್ತ ಪ್ರಭಂಧಕ ಸುರೇಂದ್ರ ಕೋಡಿ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಉಡುಪಿ ಇವರ ಪ್ರಾಯೋಜಕತ್ವದಲ್ಲಿ ಸಂಘದ ಯಕ್ಷಗಾನ ಕಲಿಕಾ ಕೇಂದ್ರ ಗುರುಗಳಾದ ಪ್ರತೀಶ್ ಕುಮಾರ್ ಬ್ರಹ್ಮಾವರ ಇವರ ನಿರ್ದೇಶನದಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಅದ್ದೂರಿ ಯಕ್ಷಗಾನ ಚಕ್ರ ಚಂಡಿಕೆ ಪ್ರದರ್ಶನಗೊಂಡಿತು.

ಶ್ರೀ ರಾಮ ಪ್ರಸಾದಿತ ಯಕ್ಷಗಾನ ಕಲಾ ಸಂಘದ ನೂತನ ಕಟ್ಟಡ ಉದ್ಘಾಟನೆ ಹಾಗೂ 38ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಕಟ್ಟಡವನ್ನು ನಾಡೋಜ ಡಾ.ಜಿ ಶಂಕರ್ ಲೋಕಾರ್ಪಣೆಗೊಳಿಸಿದರು.  ಶ್ರೀ ರಾಮ ಪ್ರಸಾದಿತ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಜಗನಾಥ ಅಮೀನ್, ಉದ್ಯಮಿ ಸಿ.ಎ ನಜುಂಡ,ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್,ಆಶಿತ ಎಂಟರ್ ಪ್ರೆöÊಸಸ್ ಸಾಸ್ತಾನ ಇದರ ಮಾಲಿಕ ಆನಂದ ಮರಕಾಲ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *