
ಕೋಟ:ಸ.ಹಿ.ಪ್ರಾ.ಶಾಲೆ ಬಾಳ್ಕುದ್ರು ಹಂಗಾರಕಟ್ಟೆಗೆ ದಾನಿಗಳಾದ ರಮೇಶ್ ಭಟ್ ಅವರು ತನ್ನ ಸಹೋದರಿ ದಿ. ಯಶೋದಾ ಆರ್. ಶಾಸ್ತಿç ಅವರ ನೆನಪಿಗಾಗಿ ಕೊಡುಗೆಯಾಗಿ ನೀಡಿದ ಸುಮಾರು 1ಲಕ್ಷ ವೆಚ್ಚದ ಬಾಲವನ ಚಿಣ್ಣರಕೂಟದ ಲೋಕಾರ್ಪಣೆ ಮೇ 30ರಂದು ಜರಗಿತು. ಸ್ಥಳೀಯರಾದ ಅನಸೂಯಾ ಟೀಚರ್ ಕೊಡುಗೆ ಹಸ್ತಾಂತರಗೊಳಿಸಿ ಶುಭಹಾರೈಸಿದರು.
ಕೊಡುಗೆ ನೀಡಿದ ದಾನಿಗಳಾದ ಕರ್ಣಾಟಕ ಬ್ಯಾಂಕ್ನ ನಿವೃತ್ತ ಪಿ.ಆರ್.ಓ. ರಮೇಶ್ ಭಟ್ ಮಾತನಾಡಿ, ನನ್ನ ಸಹೋದರಿ ದಿ.ಯಶೋಧ ಆರ್.ಶಾಸ್ತಿç ಅವರಿಗೆ ಮಕ್ಕಳೆಂದರೆ ಪಂಚಪ್ರಾಣ. ಮಕ್ಕಳು ಸಂತಸಗೊAಡರೆ ಅಗಲಿದ ಅವರಾತ್ಮಕ್ಕೆ ಶಾಂತಿ ಸಿಗುತ್ತದೆ. ಹೀಗಾಗಿ ಅಗಲಿದ ಅವರ ನೆನಪಿನಲ್ಲಿ ಈ ಕೊಡುಗೆ ನೀಡಿದ್ದೇನೆ. ಜತೆಗೆ ಪ್ರತಿ ಬಾರಿ ಕೂಡ ಶೈಕ್ಷಣಿಕ ಸಂಸ್ಥೆಗಳಿಗೆ ನಮ್ಮಿಂದಾದ ಕೊಡುಗೆ ನೀಡುತ್ತಿದ್ದೇವೆ ಎಂದರು.
ದೈ.ಶಿ. ಶಿಕ್ಷಕ ಶ್ರೀಕಾಂತ್ ಸಾಮಂತ್ ಅವರು ಕೊಡುಗೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಲೇಖಕಿ ಮೀನಾಕ್ಷಿ ರಮೇಶ್, ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಕಾಲಿಕ ಗೋಪಾಲಕೃಷ್ಣ ಉಡುಪ, ಎಸ್.ಡಿ.ಎಂಸಿ.ಅಧ್ಯಕ್ಷ ಸುಭಾಶ್ ಪೂಜಾರಿ, ಉಪಾಧ್ಯಕ್ಷ ರವೀಂದ್ರ ಸುವರ್ಣ, ಶಾಲಾ ಮುಖ್ಯ ಶಿಕ್ಷಕಿ ಕುಸುಮಾ, ಶಿಕ್ಷಕರಾದ ರಾಧಿಕಾ, ಉಷಾ, ನಾಗರತ್ನ ಯಶೋದಾ, ಸ್ಥಳೀಯರಾದ ಗಣೇಶ್ ಮರಕಾಲ ಮೊದಲಾದವರಿದ್ದರು. ಶಿಕ್ಷಕ ಶ್ರೀಕಾಂತ್ ಸಾಮಂತ್ ನಿರೂಪಿಸಿದರು.
ಕರ್ಣಾಟಕ ಬ್ಯಾಂಕ್ನ ನಿವೃತ್ತ ಪಿ.ಆರ್.ಓ. ರಮೇಶ್ ಭಟ್ ಬಾಳ್ಕುದ್ರು ಹಂಗಾರಕಟ್ಟೆ ಶಾಲೆಗೆ ಚಿಣ್ಣರಕೂಟ ಬಾಲವನವನ್ನು ಹಸ್ತಾಂತರಿಸಿದರು. ದೈ.ಶಿ. ಶಿಕ್ಷಕ ಶ್ರೀಕಾಂತ್ ಸಾಮಂತ್, ಲೇಖಕಿ ಮೀನಾಕ್ಷಿ ರಮೇಶ್, ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಕಾಲಿಕ ಗೋಪಾಲಕೃಷ್ಣ ಉಡುಪ ಮತ್ತಿತರರು ಇದ್ದರು.
ಕೋಟ.ಜೂ.2 ಕೊಡುಗೆ
Leave a Reply