News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬಾಳೆಕುದ್ರು- ಸಂಘಸಂಸ್ಥೆಗಳ ಸಾಮಾಜಿಕ ಕಾರ್ಯಗಳಿಂದ ಸಮಾಜದ ಋಣ ಸಂದಾಯ

ಬಾಳೆಕುದ್ರು ಶ್ರೀ ಮಠ ನೃಸಿಂಹಾಶ್ರಮ ಸ್ವಾಮೀಜಿ
ಕೋಟ: ಸಂಘಸಂಸ್ಥೆಗಳ ಮೂಲಕ ಸಮಾಜದ ಋಣ ಸಂದಾಯ ಮಾಡಲು ಸಾಧ್ಯ ಎಂದು ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು.

ಬಾಳೆಕುದ್ರು ಶ್ರೀಮಠದಲ್ಲಿ ಇದೇ ಬರುವ ಜ.13ರಂದು ಇಂಡಿಕಾ ಕಲಾ ಬಳಗದ ಆಶ್ರಯದಲ್ಲಿ ಇಂಡಿಕಾ ಸಂಭ್ರಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಸಂಘಸಂಸ್ಥೆಗಳ ಸಾಮಾಜಿಕ ಬದ್ಧತೆ ಪ್ರದರ್ಶಿಸುವ ಜತೆಗೆ ಸಾಂಸ್ಕೃತಿಕ ಹಾಗೂ ಸಂಸ್ಕಾರ ಉಳಿಸಿ ಬೆಳೆಸುವ ಕಾರ್ಯ ನಿರಂತವಾಗಿಸಬೇಕು ಈ ನಿಟ್ಟಿನಲ್ಲಿ ಇಂಡಿಕಾ ಕಲಾ ಬಳಗದ ಕಾರ್ಯ ಪ್ರಶಂಸನೀಯ ಎಂದು ಆಶ್ರೀವಚನ ನೀಡಿದರು.

ಕಾರ್ಯಕ್ರಮದಲ್ಲಿ ಇಂಡಿಕಾ ಕಲಾ ಬಳಗದ ಸಂಚಾಲಕ ಸಂತೋಷ್ ಕುಮಾರ್ ಕೋಟ,ಸಂಸ್ಥೆಯ ಪ್ರಮುಖರಾದ ಎಂ.ಜಯರಾಮ್ ಶೆಟ್ಟಿ, ಪ್ರದೀಪ್ ಸಾಲಿಯಾನ್, ನಾಗರಾಜ್ ಮಣೂರು ಇದ್ದರು. ಕಾರ್ಯಕ್ರಮವನ್ನು ಇಂಡಿಕಾ ಸಂಸ್ಥೆಯ ಪ್ರಭಾಕರ್ ಮಣೂರು ನಿರೂಪಿಸಿದರು.

ಬಾಳೆಕುದ್ರು ಶ್ರೀಮಠದಲ್ಲಿ ಇದೇ ಬರುವ ಜ.13ರಂದು ಇಂಡಿಕಾ ಕಲಾ ಬಳಗದ ಆಶ್ರಯದಲ್ಲಿ ಇಂಡಿಕಾ ಸಂಭ್ರಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಬಿಡುಗಡೆಗೊಳಿಸಿದರು. ್ಲ ಇಂಡಿಕಾ ಕಲಾ ಬಳಗದ ಸಂಚಾಲಕ ಸಂತೋಷ್ ಕುಮಾರ್ ಕೋಟ,ಸಂಸ್ಥೆಯ ಪ್ರಮುಖರಾದ ಎಂ.ಜಯರಾಮ್ ಶೆಟ್ಟಿ, ಪ್ರದೀಪ್ ಸಾಲಿಯಾನ್ ಇದ್ದರು.

Leave a Reply

Your email address will not be published. Required fields are marked *