
ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ 18 ನೇ ವಾರ್ಷಿಕೋತ್ಸವವು ಕರಂಬಳ್ಳಿ ಶ್ರೀ ವೆಂಕಟ್ರಮಣ ದೇವಸ್ಥಾನದ ಶ್ರೀನಿವಾಸ ಸಭಾ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು .ಬೆಳಿಗ್ಗೆ 10 ಗಂಟೆಗೆ ಶ್ರೀ ದೇವರಿಗೆ ವಿಷ್ಣುಸಹಸ್ರನಾಮಾವಳಿ ಸಹಿತ ತುಳಸಿ ಅರ್ಚನೆ , ಮಹಾಸಭೆ , ಮಧ್ಯಾಹ್ನ ಬ್ರಾಹ್ಮಣ ಸುಹಾಸಿನಿ ಆರಾಧನೆ , ಮಹಿಳೆಯರಿಗೆ ಹೂ ಕಟ್ಟುವ ಸ್ಪರ್ಧೆ , ರಂಗೋಲಿ ಸ್ಪರ್ಧೆ , ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ , ಗಂಟೆ 3.30 ರಿಂದ ಸಮಿತಿಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು .
*ಮಹಾಸಭೆಯಲ್ಲಿ ಕೀಳಂಜೆ ಶ್ರೀಕೃಷ್ಣರಾಜ್ ಭಟ್ ಅವರನ್ನು 4 ನೇ ಅವಧಿಗೆ ಸಮಿತಿಯ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು .*
ಸಂಜೆ 6.30 ರಿಂದ ನಡೆದ ಸಭಾ ಕಾರ್ಯಕ್ರಮದಲ್ಲಿ ಉಡುಪಿಯ ನಿಕಟ ಪೂರ್ವ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಪ್ರರಾದ ಶ್ರೀ* ಜಲಂಚಾರು ರಘುಪತಿ ತಂತ್ರಿ (ಅಂಕಣಕಾರರು ಹಾಗೂ ಸಮಾಜ ಚಿಂತಕರು ), ಶ್ರೀ ಉದಯ ಕುಮಾರ್ ಮಧ್ಯಸ್ತ (ಯಕ್ಷಗಾನ ಕಲಾ ಸೇವಕರು ) ಶ್ರೀಮತಿ ಜಯಾ ತಂತ್ರಿ ಕೆ (ರಾಷ್ಟ್ರ ಮಟ್ಟದ ಕ್ರೀಡಾ ಪಟು ) ಶ್ರೀ ಮುಖ್ಯಪ್ರಾಣ ಉಪಾಧ್ಯಾಯ (ಪಾಕತಜ್ಞ )*
ಇವರುಗಳನ್ನು ಸನ್ಮಾನಿಸಿ ತಮ್ಮ ಭಾಷಣದಲ್ಲಿ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ಸಾಮಾಜಿಕ ,ಧಾರ್ಮಿಕ , ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ್ತ ಪಡಿಸಿದರು .
ಇದೇ ಸಂದರ್ಭದಲ್ಲಿ ವಿದ್ಯಾನಿಧಿ ಅರ್ಪಣೆ , ವಿವಾಹದ ಸುವರ್ಣ ಮಹೋತ್ಸವ ಆಚರಿಸಿಕೊಂಡ ವಿಪ್ರ ದಂಪತಿಗಳಿಗೆ ಗೌರವಾರ್ಪಣೆ ಹಾಗೂ ವಿಪ್ರ ಗೋಪಾಲಕರಿಗೆ ಸಮ್ಮಾನ ಮಾಡಲಾಯಿತು .
ಮುಖ್ಯ ಅಥಿತಿಗಳಾಗಿ ಆಗಮಿಸಿದ ಉಡುಪಿ ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ಪ್ರೊಫೆಸರ್ ಷಣ್ಮುಖ ಹೆಬ್ಬಾರ್ ಶುಭಾಶಂಸನೆ ಗೈದರು . ಉಡುಪಿ ಜಿಲ್ಲಾ ಮಹಾಸಭಾದ ಅಧ್ಯಕ್ಷ ಸಂದೀಪ್ ಮಂಜ , ಅರ್ಚಕ ದಿವಾಕರ್ ಐತಾಳ್ , ಸಮಿತಿಯ ಉಪಾಧ್ಯಕ್ಷ ರಂಗನಾಥ ಸಾಮಗ, ಕೋಶಾಧಿಕಾರಿ ಅಜಿತ್ ಬಿಜಾಪುರ್ ಉಪಸ್ಥಿತರಿದ್ದರು .
ಕ್ರೀಡಾ ಕಾರ್ಯದರ್ಶಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಗುಂಡಿಬೈಲ್, ಚಂದ್ರಕಾಂತ್ ಕೆ ಎನ್ , ಶ್ರೀಪತಿ ಭಟ್ , ರಂಗನಾಥ ಸರಳಾಯ ,ವೇದವ್ಯಾಸ ಆಚಾರ್ , ಸುಧಾ ಭಟ್ , ಕವಿತಾ ಆಚಾರ್ , ವಸುಧಾ ಭಟ್ , ರಾಧಿಕಾ ಭಟ್ ಸಹಕರಿಸಿದರು .
ಕಾರ್ಯದರ್ಶಿ ನಾಗರಾಜ್ ಭಟ್ ಧನ್ಯವಾದ ಸಮರ್ಪಿಸಿದರು . ಪೆರಂಪಳ್ಳಿ ವಾಸುದೇವ ಭಟ್ ಮತ್ತು ಶ್ರೀನಿವಾಸ ಬಲ್ಲಾಳ್ ನಿರೂಪಿಸಿದರು . ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಯಶ್ರೀ ಬಾರಿತ್ತಾಯ ಮತ್ತು ಪ್ರಿಯಂವದಾ ನಿರ್ವಹಿಸಿದರು .













Leave a Reply